ಅಪರಾಧ ರಾಜಕೀಯ ಸುದ್ದಿ

ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ರೇವಣ್ಣ

Share It

ಧರ್ಮಸ್ಥಳ: ಮಗನ ಲೈಂಗಿಕ ಹಗರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಇದೀಗ ಮನಶಾಂತಿಗಾಗಿ ದೇವರ ಮೊರೆ ಹೋಗಿದ್ದಾರೆ.

ಧರ್ಮಸ್ಥಳದ ಮಂಜುನಾಥ ಸವಾಮಿ ಸನ್ನಿಧಿಗೆ ಭೇಟಿ ನೀಡಿರುವ ರೇವಣ್ಣ, ನನಗೆ ದೇವರ ಮೇಲೆ ಮತ್ತು ಕಾನೂನಿನ ಮೇಲೆ ನಂಬಿಕೆಯಿದೆ. ಹೀಗಾಗಿ, ದೇವರ ಮೊರೆ ಹೋಗಿದ್ದೇನೆ. ದೇವರು ನಮ್ಮೆಲ್ಲ ಕಷ್ಟಗಳನ್ನು ಕಳೆದು ನಮಗೆ ನೆಮ್ಮದಿ ಕೊಡುತ್ತಾನೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೈಂಗಿಕ ಹಗರಣದ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ, ಪ್ರಕರಣದ ಕುರಿತು ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಇದೆಲ್ಲ ರಾಜಕೀಯ ಷಡ್ಯಂತ್ರವನ್ನು ಜಯಿಸಿಕೊಂಡು, ನಾವು ಬರುತ್ತೇವೆ ಎಂಬ ವಿಶ್ವಾಸವಿದೆ ಎಂದು ರೇವಣ್ಣ ತಿಳಿಸಿದ್ದಾರೆ.

ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮೌನವಾಗಿ ಕುಳಿತಿದ್ದ ರೇವಣ್ಣ, ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಆಶೀವಾರ್ಧವನ್ನು ಪಡೆದರು.


Share It

You cannot copy content of this page