ರಾಜ್ಯದ 6 ಜಿಲ್ಲೆಗಳಲ್ಲಿ ಸೆಪ್ಟೆಂಬರ್ 14ರವರೆಗೆ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರದಲ್ಲಿ ಮಳೆಯಾಗಲಿದೆ.
ಕ್ಯಾಸಲ್ರಾಕ್, ಹೊನ್ನಾವರ, ಕೊಟ್ಟಿಗೆಹಾರ, ಗೇರುಸೊಪ್ಪ, ಭಾಗಮಂಡಲ, ಮಂಕಿ, ಸುಳ್ಯ, ಕುಮಟಾ, ಕಾರವಾರ, ಶಿರಾಲಿ, ಕನಕಪುರ, ಕಮ್ಮರಡಿ, ಪೊನ್ನಂಪೇಟೆ, ಮಂಗಳೂರು, ಸಿದ್ದಾಪುರ, ಉಡುಪಿ, ಬೆಳ್ತಂಗಡಿ, ಕದ್ರಾ, ಜೋಯಿಡಾ, ಧರ್ಮಸ್ಥಳ, ಗೋಕರ್ಣ, ಕೋಟ, ನಾಪೋಕ್ಲು, ಲಿಂಗನಮಕ್ಕಿ, ಕೊಪ್ಪ, ಪುತ್ತೂರು, ಕಾರ್ಕಳ, ಯಲ್ಲಾಪುರ, ಮಾಣಿ, ಎನ್ಆರ್ಪುರ, ಮೂಡಿಗೆರೆ, ಸೋಮವಾರಪೇಟೆ, ಕುಂದಾಪುರ, ಸಿದ್ದಾಪುರ, ಉಪ್ಪಿನಂಗಡಿ, ಬನವಾಸಿ, ತ್ಯಾಗರ್ತಿ, ಶ್ರೀರಂಗಪಟ್ಟಣ, ಜಯಪುರ, ಸರಗೂರಿನಲ್ಲಿ ಮಳೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆಯಾಗುತ್ತಿದೆ.

