ಬಳ್ಳಾರಿ ಜೈಲಿಗೆ ಆಅಗಮಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಕಾನೂನು ಹೋರಾಟದ ಚರ್ಚೆ

IMG-20240612-WA0030
Share It

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ಕೊಲೆ ಆರೋಪಿ ನಟ ದರ್ಶನ್ ನೋಡಲು ಅವರ ಪತ್ನಿ ವಿಜಯಲಕ್ಷ್ಮಿ ವಕೀಲರ ತಂಡದ ಜತೆ ಆಗಮಿಸಿದ್ದರು.

ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ ಮೂರು ದಿನದ ಬಳಿಕ ಹೊಸ ಬಟ್ಟೆ, ಡ್ರೈ ಫ್ರೂಟ್ಸ್, ಬ್ರೆಷ್​, ಪೇಸ್ಟ್​, ಔಷಧಿ, ಇಟ್ಟುಕೊಂಡಿರುವ ಎರಡು ಬ್ಯಾಗ್ ಜೊತೆಗೆ ವಿಜಯಲಕ್ಷ್ಮಿ ಅವರು ಭೇಟಿ ನೀಡಿದರು. ಸೆಕ್ಯೂರಿಟಿ ರೂಂನಲ್ಲಿ ಬ್ಯಾಗ್ ಪರಿಶೀಲನೆ ಬಳಿಕ ದರ್ಶನ್ ಕೊಠಡಿಯತ್ತ ಅವರು ತೆರಳಿದರು.

ಹೈಸೆಕ್ಯೂರಿಟಿ ಸೆಲ್​ಗೆ ವಿಸಿಟರ್ ಗೆ ಪ್ರವೇಶವಿಲ್ಲದ ಕಾರಣ ವಿಜಿಟರ್ ಸೆಲ್​ನಲ್ಲಿ ಭೇಟಿಗೆ ಅವಕಾಶ ನೀಡಲಾಗಿದ್ದು, ಅಲ್ಲಿಯೇ ದರ್ಶನ್​ ಭೇಟಿ ಮಾಡಿ ಮಾತನಾಡಿಸಿದರು ಎನ್ನಲಾಗಿದೆ. ಪತಿಯ ಆರೋಗ್ಯ ವಿಚಾರಿಸಿದ ವಿಜಯಲಕ್ಷ್ಮಿ, ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಅವರು ವಕೀಲರ ಜೊತೆ ಆಗಮಿಸಿದ್ದರು ಎನ್ನಲಾಗಿದೆ.


Share It

You cannot copy content of this page