ಬೆಂಗಳೂರು: ಸರಕಾರಿ ಶಾಲೆಗಳ ಆಸ್ತಿ ಯ ರಕ್ಷಣೆಗೆ ಮುಂದಾಗಿರುವ ಸರಕಾರ ರಾಜ್ಯದ ಎಲ್ಲ ಶಾಲೆಗಳ ಆಸ್ತಿ ಸರ್ವೆ ಮಾಡಿಸಲು ತೀರ್ಮಾನಿಸಿದೆ.
ಅನೇಕ ಕಡೆಗಳಲ್ಲಿ ಶಾಲೆಗೆ ಸೇರಿದ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಸೇರಿದ ಜಮೀನು ಸರ್ವೆ ನಡೆಸಿ, ಜಾಗಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿ, ಖಾತಾ ಮಾಡಿಕೊಡಲು ಕಂದಾಯ ಇಲಾಖೆ ತೀರ್ಮಾನಿಸಿದೆ.
ಈ ಸಂಬಂಧ ಜೂ. 21 ರಂದು ವಿಕಾಸೌಧದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಎರಡು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.