ಉಪಯುಕ್ತ ಸುದ್ದಿ

ಸರಕಾರಿ ಶಾಲೆಗಳ ಆಸ್ತಿ ಸರ್ವೆಗೆ ಸರಕಾರ ತೀರ್ಮಾನ: ಜೂ.21 ರಂದು ಸಚಿವರ ಮಹತ್ವದ ಸಭೆ

Share It

ಬೆಂಗಳೂರು: ಸರಕಾರಿ ಶಾಲೆಗಳ ಆಸ್ತಿ ಯ ರಕ್ಷಣೆಗೆ ಮುಂದಾಗಿರುವ ಸರಕಾರ ರಾಜ್ಯದ ಎಲ್ಲ ಶಾಲೆಗಳ ಆಸ್ತಿ ಸರ್ವೆ ಮಾಡಿಸಲು ತೀರ್ಮಾನಿಸಿದೆ.

ಅನೇಕ ಕಡೆಗಳಲ್ಲಿ ಶಾಲೆಗೆ ಸೇರಿದ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಸೇರಿದ ಜಮೀನು ಸರ್ವೆ ನಡೆಸಿ, ಜಾಗಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿ, ಖಾತಾ ಮಾಡಿಕೊಡಲು ಕಂದಾಯ ಇಲಾಖೆ ತೀರ್ಮಾನಿಸಿದೆ.

ಈ ಸಂಬಂಧ ಜೂ. 21 ರಂದು ವಿಕಾಸೌಧದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಎರಡು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.


Share It

You cannot copy content of this page