ಪಾವಗಡ: ತಾಲೂಕಿನ ರಾಜವಂತ್ರಿ ಗ್ರಾಮದ ರೈತ ಧರ್ಮಪ್ಪ ಎಂಬವರಿಗೆ ಸೇರಿದ ಕುರಿಗಳು ಇಂದು ಬೆಳಿಗ್ಗೆ ವಿಷ ಆಹಾರ ಸೇರಿಸಿ ಸುಮಾರು 20 ಕುರಿಗಳು ಮತೃಪಟಿರುವ ಘಟನೆ ಸಂಭವಿಸಿದೆ.
ರೈತ ತಮ್ಮ ಫಸಲಿಗೆ ಸಿಂಪಡಿಸಿದಂತಹ ಔಷಧಿಯ ಬಳಸಿದ ಮೇವು ತಿಂದು ಸುಮಾರು 20 ಕುರಿಗಳು ರೈತನಿಗೆ ಸುಮಾರು 2 ಲಕ್ಷದಷ್ಟು ನಷ್ಟ ಉಂಟಾಗಿದ್ದು ರೈತ ಈ ಘಟನೆ ಯಿಂದ ಕುಟುಂಬ ಕಂಗಾಲಾಗಿದೆ.
ತಕ್ಷಣ ಪಶು ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಕುರಿಗಳ ಮರಣೋತ್ತರ ಪರೀಕ್ಷೆ ಮಾಡಿ ವರದಿ ಸಲ್ಲಿಸಿದ್ದಾರೆ. ಸರ್ಕಾರ ಈ ರೈತನ ಕುಟುಂಬಕ್ಕೆ ಪರಿಹಾರ ನೀಡಿ ಸಂಕಷ್ಟ ದೂರ ಮಾಡಬೇಕಾಗಿದೆ.

