ಎಟಿಎಂಗೆ ತುಂಬುವ ಹಣ ಎಗರಿಸಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

Share It

ಮೈಸೂರು: ಎಟಿಎಂಗೆ ತುಂಬುವ ಹಣವನ್ನು ಎಗರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬAಧ ಎಫ್‌ಐಆರ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಹುಣಸೂರು ತುರಗನೂರು ಗ್ರಾಮದ ಅಕ್ಷಯ್ ಹಾಗೂ ತೇಜಸ್ವಿನಿ ಬಂಧಿತರು.

ಅಕ್ಷಯ್ ಕುಮಾರ್ ಟಿಎಲ್ ಎಂಟರ್ಪ್ರೈಸಸ್ ನಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಆಗಾಗ ಹಣ ಎಗರಿಸುವುದನ್ನು ಮಾಡಿಕೊಂಡು ಬಂದಿದ್ದ. ಎಚ್.ಡಿ.ಕೋಟೆ ತಾಲೂಕಿನ ಗದ್ದಿಗೆ ಗ್ರಾಮದಲ್ಲಿ ಹಣ ತುಂಬುವಾಗ 5.8 ಲಕ್ಷ ರು.ಹಣವನ್ನು ಲೋಡ್ ಮಾಡದೆ, ಎಗರಿಸಿ ಪರಾರಿಯಾಗಿದ್ದ.

ಈ ಸಂಸ್ಥೆ ಮೈಸೂರಿನ 16 ಎಟಿಎಂಗಳಿಗೆ ಹಣ ತುಂಬಿಸುವ ಹೊಣೆಯನ್ನು ಹೊತ್ತುಕೊಂಡಿದೆ. ಸಂಸ್ಥೆ ಹಣ ಆಡಿಟ್ ಮಾಡುವ ವೇಳೆ ವ್ಯತ್ಯಾಸದ ಶಂಕೆ ಬಂದಿದ್ದು, ಕ್ಯಾಶ್ ಲೋಡಿಂಗ್ ವೇಳೆ ಈತ ಹಣ ಎಗರಿಸಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆ ಅಕ್ಷಯ್ ಕುಮಾರ್ ವಿರುದ್ಧ ದೂರು ನೀಡಿತ್ತು.

ಆರೋಪಿಯ ಬೆನ್ನುಹತ್ತಿದ ಪೊಲೀಸರು, ಆತನಿಗೆ ಸಹಾಯ ಮಾಡಿದ ತೇಜಸ್ವಿನಿಯನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಅಕ್ಷಯ್ ಕುಮಾರ್, ಹುಣಸೂರು ತಾಲೂಕಿನ ತುರುಗನೂರು ಗ್ರಾಮದಲ್ಲಿ ಸ್ನೇಹಿತರ ಜತೆಗೆ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು.

ಈ ವೇಳೆ ಅಕ್ಷಯ್ ಕುಮಾರ್ ಮತ್ತು ಸ್ನೇಹಿತರು, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ ನಡೆಸಿದರು ಎನ್ನಲಾಗಿದೆ. ಕೆಲಕಾಲ ವಾಗ್ವಾದದ ಬಳಿಕ ಪೊಲೀಸರ ವಶಕ್ಕೆ ಆತನನ್ನು ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.


Share It

You May Have Missed

You cannot copy content of this page