ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನಿಕಟಪೂರ್ವ ಲೋಕಸಭಾ ಸದಸ್ಯರಾದ DK ಸುರೇಶ್ ಅವರಿಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ ಸೇರಿ ಕಾಂಗ್ರೆಸ್ ನಾಯಕರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿವರಾಮ ಗೌಡ, ಜಯಪ್ರಕಾಶ್ ಹೆಗಡೆ, ಬಿ.ಎನ್. ಚಂದ್ರಪ್ಪ, ಪ್ರೊ. ರಾಜೀವ್ ಗೌಡ, ಮತ್ತು 2024ರ ಲೋಕಸಭಾ ಅಭ್ಯರ್ಥಿಗಳಾದ ಮನ್ಸೂರ್ ಆಲಿ ಖಾನ್, ಎಮ್ ಲಕ್ಷ್ಮಣ್, ಕೆ ವಿ ಗೌತಮ್, ರಕ್ಷಾ ರಾಮಯ್ಯ ಉಪಸ್ಥಿತರಿದ್ದರು.