ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸರಿಂದ ಮೂವರು ಗಾಂಜಾ ಪೆಡ್ಲರ್ಗಳನ್ನು ಬಂಧಿಸಲಾಗಿದೆ.
ಸಂದೀಪ್(23), ಅಖಿಲ್(22), ಆಕಾಶ್(21) ಬಂಧಿತ ಗಾಂಜಾ ಪೆಡ್ಲರ್ಸ್. 6 ಕೆ.ಜಿಗೂ ಹೆಚ್ಚು ಗಾಂಜಾ, 20 ಗ್ರಾಂ ಹೈಡ್ರೋ ಗಾಂಜಾ, ನಗದು ಜಪ್ತಿ ಮಾಡಲಾಗಿದೆ.
ಕೇರಳದಿಂದ ರೈಲಿನ ಮುಖಾಂತರ ಬೆಂಗಳೂರಿಗೆ ಗಾಂಜಾ ತರುತ್ತಿದ್ದ ಗ್ಯಾಂಗ್, ಹೊರ ರಾಜ್ಯದವರನ್ನೇ ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು.
ಮತ್ತೊಬ್ಬ ಪ್ರಮುಖ ಅರೋಪಿ ಅಲ್ತಾಫ್ ಪತ್ತೆಗಾಗಿ ಪೊಲೀಸರಿಂದ ಶೋಧ ಮಾಡಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
