ಬೆಂಗಳೂರು: ರಾಜ್ಯದ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ.
ಮಳೆಯಾದ ಪ್ರದೇಶಗಳು: ಕ್ಯಾಸಲ್ರಾಕ್, ಕೊಟ್ಟಿಗೆಹಾರ, ಪುತ್ತೂರು, ಭಾಗಮಂಡಲ, ಆಗುಂಬೆ, ಮಂಕಿ, ಶಿರಾಲಿ, ಲಿಂಗನಮಕ್ಕಿ, ಮಾಣಿ, ಸಿದ್ದಾಪುರ, ಗೇರುಸೊಪ್ಪ, ಬೆಳ್ತಂಗಡಿ, ಶೃಂಗೇರಿ, ಪೊನ್ನಂಪೇಟೆ, ಹೊನ್ನಾವರ, ಉಪ್ಪಿನಂಗಡಿ, ಕಳಸ, ಹುಂಚದಕಟ್ಟೆ, ಕಮ್ಮರಡಿ, ಮೂರ್ನಾಡು, ನಾಪೋಕ್ಲು, ಪಣಂಬೂರು, ಉಡುಪಿ, ಮಂಗಳೂರು, ಕುಮಟಾದಲ್ಲಿ ಮಳೆಯಾಗಿದೆ.
ಯಲ್ಲಾಪುರ, ಬೆಳಗಾವಿ, ಮೂಡಿಗೆರೆ, ಜಯಪುರ, ನಿಪ್ಪಾಣಿ, ಗೋಕರ್ಣ, ಕೋಟ, ಮುಂಡಗೋಡು, ಸಂಕೇಶ್ವರ, ಹುಕ್ಕೇರಿ, ಕೋಟ, ಮಾನ್ವಿ, ಮಸ್ಕಿ, ಧಾರವಾಡ, ಬೈಲಹೊಂಗಲ, ಶಿವಮೊಗ್ಗ, ಎನ್ಆರ್ಪುರ, ಬಾಳೆಹೊನ್ನೂರಿನಲ್ಲಿ ಕೂಡ ಮಳೆಯಾಗಿದೆ.