ಕ್ರೀಡೆ ಸುದ್ದಿ

IND Vs BAN : ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಸೂರ್ಯ ಪಡೆ

Share It

ಶಿವರಾಜು ವೈ. ಪಿ
ಎಲೆರಾಂಪುರ

ಗ್ವಾಲಿಯರ್ : ಭಾನುವಾರ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ, ಭಾರತ ಮತ್ತು ಬಾಂಗ್ಲಾದ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ 7 ವಿಕೆಟ್ ಗಳ ಭರ್ಜರಿ ಜಯಸಾಧಿಸಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸೂರ್ಯ ಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಮಯಂಕ್ ಯಾದವ್ ಗೆ ಭಾರತದ ಪರ ಡೆಬ್ಯು ಮಾಡಲು ಅವಕಾಶ ಕಲ್ಪಿಸಿಕೊಟ್ಟಿತು.

ಮೊದಲನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶದ ಪರ ಬ್ಯಾಟಿಂಗ್ ಆಡಲು ಆರಂಭಿಕ ಆಟಗಾರರಾಗಿ ಹೊಸೈನ್ ಎಮೋನ್ ಮತ್ತು ಲಿಟನ್ ದಾಸ್ ಕಣಕ್ಕಿಳಿದರು. ಭಾರತದ ಪರ ಮೊದಲ ಓವರ್ ಮಾಡಲು ಬಂದ ಆರ್ಷದೀಪ್ ಸಿಂಗ್ ಇಬ್ಬರು ಆರಂಭಿಕ ಆಟಗಾರರನ್ನು ಪೆವಿಲ್ ಏನ್ ಕಡೆ ಮುಖ ಮಾಡುವಂತೆ ಮಾಡಿದರು.

ಬಳಿಕ ಕಣಕ್ಕಿಳಿದ ನಾಯಕ ಹೊಸೈನ್ ಶಾಂಟೋ 25 ಬಾಲ್ ಗಳಲ್ಲಿ 27 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಕ್ರಿಸ್ ಕಚ್ಚಿ ನಿಂತ ಮೆಹದಿ ಮಿರಾಜ್ 32 ಬಾಲ್ ಗಳಲ್ಲಿ 3 ಬೌಂಡರಿ ಸಹಿತ 35 ರನ್ ಗಳಿಸಿದರು. ಇದು ಬಿಟ್ಟರೆ ಇನ್ಯಾವ ಆಟಗಾರರೂ ಸಹ ಒಂದಂಕಿಯ ಸಂಖ್ಯೆಯನ್ನು ದಾಟಲಿಲ್ಲ. 19.5 ಓವರ್ ಗಳಲ್ಲಿ ಬಾಂಗ್ಲಾದೇಶ ತನ್ನ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 127 ರನ್ ಗಳ ಟಾರ್ಗೆಟ್ ಅನ್ನು ನೀಡಿತು.

ಇನ್ನು ಭಾರತದ ಪರ ಬೌಲಿಂಗ್ ಮಾಡಿದ ಆರ್ಷದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಪಡೆದು ಮಿಂಚಿದರು. ಇದಲ್ಲದೆ ಮಯಂಕ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದು ಬಾಂಗ್ಲಾದೇಶವನ್ನು 127 ಕ್ಕೆ ಕಟ್ಟಿಹಾಕಲು ಪ್ರಮುಖ ಪಾತ್ರವಹಿಸಿದರು.

ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಟಾರ್ಗೆಟ್ ಬೆನ್ನತ್ತಲು ಬಂದ ಟೀಮ್ ಇಂಡಿಯಾದ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮ ಭಾರತಕ್ಕೆ ಉತ್ತಮ ಆರಂಭ ನೀಡಿದರು . ಬಳಿಕ ಕಣಕ್ಕಿಳಿದ ನಾಯಾಕ ಸೂರ್ಯ ಕುಮಾರ್ ಯಾದವ್ ತನ್ನ ಹೊಡಿ ಬಡಿ ಆಟದೊಂದಿಗೆ ಕೇವಲ 14 ಬಾಲ್ ಗಳಲ್ಲಿ 3 ಸಿಕ್ಸರ್ 2 ಬೌಂಡರಿ ಸಹಿತ 29 ರನ್ ಗಳಿಸಿದರು.

ನಂತರ ಮೈದಾನಕ್ಕಿಳಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಾನು ಆಡಿದ ಕೇವಲ 16 ಬಾಲ್ ಗಳಲ್ಲಿ 39 ರನ್ ಚಚ್ಚುವ ಮೂಲಕ ಬಾಂಗ್ಲಾದೇಶದ ಬೌಲರ್ ಗಳನ್ನು ಬೆಂಡೆತ್ತಿ ಪಂದ್ಯ ಮುಗಿಸಿದರು.


Share It

You cannot copy content of this page