ಬೆಂಗಳೂರು: ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆ ಅಂಗವಾಗಿ ನಗರದ ಎರಡನೇ ಅತ್ಯಂತ ಹಳೆಯ ಕೆಂಪೇಗೌಡ ಪ್ರತಿಮೆಗೆ ಸಾರಿಗೆ ಮತ್ತು ಮುಜರಾಯಿ ಇಲಾಕೇ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾಲಾರ್ಪಣೆ ಮಾಡಿದರು.
ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಮೊದಲಿಗೆ ಸ್ಥಾಪಿತವಾಗಿದ್ದು ಬಿಬಿಎಂಪಿ ಕೇಂದ್ರ ಕಛೇರಿಯ ಮುಂಭಾಗದಲ್ಲಿ, ತದನಂತರ ರಾಮಲಿಂಗಾ ರೆಡ್ಡಿ ಮತ್ತು ಬಿಬಿಎಂಪಿ ಮಾವಳ್ಳಿ ವಾರ್ಡ್ ನ ಮಾಜಿ ಕಾರ್ಪೊರೇಟರ್ ಉದಯಶಂಕರ್ ಅವರ ನೇತೃತ್ವದಲ್ಲಿ ಅಶ್ವಾರೂಢ ಕೆಂಪೇಗೌಡರ ಪ್ರತಿಮೆಯನ್ನು 2006ರಲ್ಲಿ ಮಾವಳ್ಳಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು.
ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರನ್ನು ಆಹ್ವಾನಿಸಿ ಉದ್ಘಾಟಿಸಲಾಗಿತ್ತು. ಇಂದು ಬೆಂಗಳೂರಿನ ಹಲವು ಕಡೆ ಕೆಂಪೇಗೌಡರ ಪ್ರತಿಮೆಗಳ ಅನಾವರಣವಾಗಿವೆ. ಆದರೆ, ಬಿಬಿಎಂಪಿ ಹೊರತುಪಡಿಸಿ ಬೆಂಗಳೂರು ನಗರಕ್ಕೆ ಎರಡನೇ ಪ್ರತಿಮೆ ಅನಾವರಣವಾಗಿದ್ದು ಮಾವಳ್ಳಿಯಲ್ಲಿ ಎಂಬುದು ಅಚ್ಚರಿಯ ಸಂಗತಿ.
ಇಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಆ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಉದಯಶಂಕರ್ ಮಾಜಿ ಕಾರ್ಪೊರೇಟರ್, ಚಂದ್ರಪ್ಪ ಮಾಜಿ ಕಾರ್ಪೊರೇಟರ್ ಮತ್ತು ನಾಗರಾಜು, ಮಾಜಿ ಕಾರ್ಪೋರೇಟರ್ ಹಾಜರಿದ್ದರು.