ಬೆಂಗಳೂರು: ಅಕ್ರಮ ಸಂಬಂಧ ಯಾವತ್ತಿದ್ದರೂ ಡೇಂಜರ್ ಅನ್ನೋ ಮಾತಿದೆ. ಅದು ಮತ್ತೊಮ್ಮೆ ಸಾಭೀತಾಗಿದೆ.
26 ವರ್ಷದ ಟೆಕ್ಕಿ ಯುವಕನ ಬಲೆಗೆ ಬಿದ್ದ 36 ವರ್ಷದ ವಿವಾಹಿತ ಮಹಿಳೆಯೊಬ್ಬಳು ಗಂಡ ಮತ್ತು ಮಕ್ಕಳನ್ನು ವಂಚಿಸಿ, ಓಯೋ ರೂಮ್ ಹೊಕ್ಕು ಚಕ್ಕಂದ ಹಾಡುವ ಆಸೆಯಲ್ಲಿ ಹೆಣವಾಗಿದ್ದಾಳೆ. ಕೆಂಗೇರಿಯ ಹರಿಣಿ (36) ಕೊಲೆಯಾದ ವಿವಾಹಿತ ಮಹಿಳೆ. ಕೃತ್ಯ ಎಸಗಿದ ಆರೋಪದ ಅಡಿ ಟೆಕ್ಕಿ ಯಶಸ್ (25) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹೋಟೆಲ್ ನ ಕೊಠಡಿಯೊಂದರಲ್ಲಿ 36 ವರ್ಷದ ಯುವತಿ ಕೊಲೆಯಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ಯುವತಿ ಹರಿಣಿಯ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆಕೆಯನ್ನು ಕೊಂದದ್ದು 25 ವರ್ಷದ ಆರೋಪಿ ಯಶಸ್ ಎಂದು ಗೊತ್ತಾಗಿದೆ.
ಕೆಂಗೇರಿ ನಿವಾಸಿಗಳಾಗಿದ್ದ ಈ ಇಬ್ಬರಿಗೆ ಕೆಲವು ವರ್ಷಗಳಿಂದ ಇಬ್ಬರಿಗೂ ಪರಸ್ಪರ ಸ್ನೇಹ, ಸಲುಗೆ, ಪ್ರೇಮ, ಕಾಮ ಎಲ್ಲವೂ ಇತ್ತ. ಗಂಡ ಮತ್ತು ಮಕ್ಕಳನ್ನು ವಂಚಿಸಿದ ಆಕೆ ಆತನ ಜತೆಗೆ ಅನೇಕ ಸುಖದ ರಾತ್ರಿಗಳನ್ನು ಕಳೆದಿದ್ದಳು. ಅಂತಹದ್ದೇ ಇನ್ನೊಂದು ರಾತ್ರಿ ಕಳೆಯಲು ಒಯೋ ರೂಮಿಗೆ ಹೋಗಿದ್ದಾಗ ಕೊಲೆಯಾಗಿದ್ದಾಳೆ.
ಮಡದಿಯ ಇಂತಹ ಆಟವನ್ನು ಕಂಡು ಗಂಡ ಹೆಂಡತಿಯನ್ನು ಮನೆಯಿಂದ ಆಚೆ ಹೋಗದಂತೆ ಲಕ್ಷ್ಮಣ ರೇಖೆ ಹಾಕಿದ್ದ. ಹೀಗಾಗಿ, ಕಳೆದ ಎರಡು ತಿಂಗಳಿಂದ ಹರಿಣಿ ಪ್ರಿಯಕರನ ಜತೆಗೆ ಮಾತನಾಡದೆ ದೂರ ಉಳಿದಿದ್ದರು. ಆದರೆ, ಆಕೆಯನ್ನು ಪುಸಲಾಯಿಸಿ ಓಯೋ ರೂಮಿಗೆ ಕರೆದೊಯ್ದು, ಇದೇ ವಿಚಾರಕ್ಕೆ ಗಲಾಟೆ ತೆಗೆದು, ಆಕ್ರೋಶದಿಂದ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಮೃತ ಹರಿಣಿ 2012 ರಲ್ಲಿ ಮದುವೆ ಆಗಿದ್ದು, ಪತಿಯ ಜನತೆಗೆ ತ ಕೆಂಗೇರಿಯಲ್ಲಿ ವಾಸವಿದ್ದರು. ದಂಪತಿಗೆ 13 ಹಾಗೂ 10 ವರ್ಷದ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಜಾತ್ರೆಯ ಸಂದರ್ಭದಲ್ಲಿ ಹರಿಣಿಗೆ ತಲಘಟ್ಟಪುರದ ನಿವಾಸಿ ಯಶಸ್ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ನಿತ್ಯ ಮಾತುಕತೆ ನಡೆಸುತ್ತಿದ್ದರು. ವಿವಾಹಿತ ಮಹಿಳೆ ಹರಿಣಿ ಹಾಗೂ ಟೆಕ್ಕಿ ಯಶಸ್ ಮಧ್ಯೆ ಸ್ನೇಹ ಬೆಳೆದಿತ್ತು. ಇಬ್ಬರೂ ಆಗಾಗ್ಗೆ ಭೇಟಿ ಮಾಡುತ್ತಿದ್ದರು. ವಾಟ್ಸ್ಆ್ಯಪ್ನಲ್ಲಿ ಚಾಟಿಂಗ್ ನಡೆಸುತ್ತಿದ್ದರು.
ಪತ್ನಿಯ ನಡೆ ಪತಿಗೆ ಅನುಮಾನ ತರಿಸಿದ್ದು, ಆತ ಹೊರಗೆ ಹೋಗದಂತೆ ತಾಕೀತು ಮಾಡಿದ್ದ. ಅದರ ಮಾಹಿತಿ ತಿಳಿದಿದ್ದ ಆರೋಪಿ ಯಶಸ್, ಹರಿಣಿ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದ. ಕೆಲವು ದಿನಗಳ ನಂತರ ಮನೆಯಿಂದ ಹೊರ ಬಂದಿದ್ದ ಹರಿಣಿ, ಮತ್ತೆ ತನ್ನ ಗೆಳೆಯನನ್ನು ಸಂಪರ್ಕಿಸಲು ಗಂಡ ಹಾಕಿದ ಲಕ್ಷ್ಮಣ ರೇಖೆ ದಾಟಿ, ಕೊನೆಗೆ ಕೊಲೆಯಾಗಿ ಪತ್ತೆಯಾಗಿದ್ದಾಳೆ.
ಗಂಡನ ಮಾತು ಕೇಳಿ ಹರಿಣಿ ಮತ್ತೆ ಇನ್ನೆಂದು ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಭಾವಿಸಿ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪಿ, ಚಾಕುವನ್ನು ಖರೀದಿಸಿಯೇ ಹೋಟೆಲ್ ರೂಮಿಗೆ ಲರೆಸಿಕೊಂಡಿದ್ದ. ಪ್ರಣಯದ ಆಸೆಯಿಂದ ಗಂಡ ಮಕ್ಕಳಿಗೆ ಸುಳ್ಳು ಹೇಳಿ ಅಲ್ಲಿಗೆ ಬಂದಿದ್ದ ಹರಿಣಿ ಹೆಣವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.