ಸೆ.30 ಕ್ಕೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Share It

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.30 ಕ್ಕೆ ಮುಂದೂಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿ ಇರುವ ನಟ ದರ್ಶನ್, ಜಾಮೀನು ಕೋರಿ 57 ನೇ ಸಿಸಿಎಚ್ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ಆರಂಭಿಸಿದ ನ್ಯಾಯಾಲಯ, ಮೊದಲಿಗೆ ಸರಕಾರದ ಅಭಿಯೋಜಕರ ಅಭಿಪ್ರಾಯ ಪಡೆಯಲಾಯಿತು. ಅನಂತರ ಮುಂದಿನ ವಿಚಾರಣೆ ಸೋಮುವಾರಕ್ಕೆ ಮುಂದೂಡಲಾಯಿತು.

ಸೋಮವಾರ ದರ್ಶನ್ ಪರ ವಕೀಲರು ವಾದ ಮಂಡನೆ ಮಾಡಲಿದ್ದು, ದರ್ಶನ್ ಗೆ ಜಾಮೀನು ನೀಡಬೇಕಾದ ಕಾರಣಗಳನ್ನು ನ್ಯಾಯಾಲಯದ ಮುಂದೆ ಮಂಡನೆ ಮಾಡಲಿದ್ದಾರೆ. ಅನಂತರ ವಿಶೇಷ ಸರಕಾರಿ ಅಭಿಯೋಜಕರ ವಾದ ಮಂಡನೆ ಯಾಗಲಿದ್ದು, ಅನಂತರ ಜಾಮೀನು ನೀಡುವ ಕುರಿತು ನ್ಯಾಯಾಲಯ ಆದೇಶ ಮಾಡಲಿದೆ.


Share It

You May Have Missed

You cannot copy content of this page