ನವಲಗುಂದ : ಅಳಗವಾಡಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಮಂಗಳವಾರ ರಾತ್ರಿ ಭಗ್ನಗೊಳಿಸಿದ್ದಾರೆ.
ಬುದುವಾರ ಬೆಳಿಗ್ಗೆ ಗ್ರಾಮಸ್ಥರು ರಾಯಣ್ಣ ಮೂರ್ತಿಯ ಬಲಗಡೆ ಕೈಯನ್ನು ಕಟ್ ಮಾಡಿ ಖಡ್ಗ ಸಮೇತ ವಿರೂಪಗೊಳಿಸಿದ್ದನ್ನು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ .
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ನವಲಗುಂದ ಠಾಣೆ ಪೊಲೀಸರು ಪ್ರತಿಮೆಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ರಾಯಣ್ಣನ ಮೂರ್ತಿಗೆ ಪೂರ್ಣ ಬಟ್ಟೆ ಸುತ್ತಿ ಏನೂ ಕಾಣದ ರೂಪದಲ್ಲಿ ಸದ್ಯ ರಾಯಣ್ಣನ ಮೂರ್ತಿ ಇದೆ.
ರಾಯಣ್ಣ ಮೂರ್ತಿ ಮುಂದೆ ಸಮಾಜ ಮುಖಂಡರು ಅಭಿಮಾನಿಗಳು ಸುರೇಶ ಗೋಕಾಕ್ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಬಂದುಬಸ್ತ ವಹಿಸಿದ್ದಾರೆ