ಸುದ್ದಿ

ಉಪರಾಷ್ಟ್ರಪತಿ ಭವನದಲ್ಲಿ ಡಿ.ಎಸ್. ವೀರಯ್ಯ ಅವರ ಅಂಬೇಡ್ಕರ್ ಸಂದೇಶ ಅನುವಾದಿತ ಪುಸ್ತಕ ಬಿಡುಗಡೆ

Share It


ನವದೆಹಲಿ: ಮಾಜಿ ಸಂಸದ, ಸಾಹಿತಿ ಡಿ.ಎಸ್. ವೀರಯ್ಯ ಅವರ ಅಂಬೇಡ್ಕರ್ ಸಂದೇಶಗಳು ಪುಸ್ತಕಗಳ ಹಿಂದಿ ಮತ್ತು ಇಂಗ್ಲೀಷ್ ಅವತರಣಿಕೆಯನ್ನು ಉಪರಾಷ್ಟ್ರಪತಿ ಧನಕರ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಧನಕರ್ ಅವರು, ಅಂಬೇಡ್ಕರ್ ಅವರ ಆಶಯಗಳನ್ನು ಡಿ.ಎಸ್. ವೀರಯ್ಯ ಅವರು ಬಹಳ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ಅಮೃತ್ ಕಾಲದ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಆಶಯಗಳ ಅವಶ್ಯಕತೆ ಇದೆ. ಹೀಗಾಗಿ, ಅವರ ಪುಸ್ತಕಗಳು ಪ್ರತಿ ಮನೆಯ ಆಸ್ತಿಯಾಗಬೇಕು ಎಂದರು.

ಸಂವಿಧಾನದ ಪೀಠಿಕೆ ಬದಲಾಯಿಸಿ, ತುರ್ತು ಪರಿಸ್ಥಿತಿ ಜಾರಿಗೊಳಿಸಿ ಅಂಬೇಡ್ಕರ್ ಆಶಯಗಳನ್ನು ತುಳಿಯುವ ಪ್ರಯತ್ನ ನಡೆದಿದೆ. ಆದರೆ, ಅಂಬೇಡ್ಕರ್ ಅವರ ಆಶಯಗಳು ಎಂದೆಂದಿಗೂ ಪ್ರಸ್ತುತ ಎಂಬುದನ್ನು ನಾವೆಲ್ಲರೂ ಮನಗಾಣಬೇಕು. ಇಂತಹ ಸಂದರ್ಭದಲ್ಲಿ ವೀರಯ್ಯ ಅವರ ಅಂಬೇಡ್ಕರ್ ಕಿ ಸಂದೇಶ್ ಪುಸ್ತಕ ಪ್ರಸ್ತುತ ಇದನ್ನು ಬಿಡುಗಡೆಗೊಳಿಸಲು ನನಗೆ ಹೆಮ್ಮೆಯಿದೆ ಎಂದರು.

ಡಿ.ಎಸ್. ವೀರಯ್ಯ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದವರು. ಜತೆಗೆ 15 ಪುಸ್ತಕಗಳನ್ನು ಬರೆದಿರುವ ಅವರು ಅಂಬೇಡ್ಕರ್ ಅವರ ಕುರಿತು ಬಹಳ ಅಧ್ಯಯನ ನಡೆಸಿದವರು. ಅವರ ಅನುಭವದಿಂದ ಅಂಬೇಡ್ಕರ್ ಸಂದೇಶಗಳು ಪುಸ್ತಕ ಹೊರಬಂದಿದೆ. ಈ ಪುಸ್ತಕ ದೇಶದ ಎಲ್ಲ ಜನಪ್ರತಿನಿಧಿಗಳ ಕೈಗೆ ಸಿಗುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದರು, ಉದ್ಯಮಿ ವಿಜಯ ಸಂಕೇಶ್ವರ್, ವಿಮರ್ಶಕರಾದ ಬೈರಮಂಗಲ ರಾಮೇಗೌಡ, ನಿವೃತ್ತ ಎಡಿಜಿಪಿ ಭಾಸ್ಕರ್ ಪ್ರಸಾದ್, ಸಂಜಯ್ ಪಾಸ್ವಾನ್, ಅನುವಾದಕರಾದ H.S.M. ಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.


Share It

You cannot copy content of this page