ಬೆಂಗಳೂರು: ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬದ ಅಮೃತ ಮಹೋತ್ಸವ ಆಚರಿಸಿಕೊಂಡ ಸಹಕಾರ ಸಚಿವ ಕೆ.ಎನ್ ರಾಜಣ್ಣ ಕೆಲದಿನಗಳಿಂದ ನಿಲ್ಲಿಸಿದ್ದ ತಮ್ಮ ಮಾತುಗಾರಿಕೆಯನ್ನು ಪುನಃ ಆರಂಭಿಸಿದ್ದಾರೆ.
ನಿನ್ನೆ ಗುರುವಾರ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ರಾಜಣ್ಣ ಅವರು ರಾಜ್ಯದಲ್ಲಿ ಆಗಸ್ಟ್ ಕ್ರಾಂತಿ ಅಗಲಿದೆ ಅಂತ ಹೇಳಿದ್ದಾರೆ.
ಇಷ್ಟಾದರೂ ಅವರು ಯಾಕೆ ಹಾಗೆ ಹೇಳಿದರು ಎಂದು ಅರ್ಥಮಾಡಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಯಾವ ಕ್ರಾಂತಿ? ಸರ್ಕಾರದಲ್ಲೋ? ಕಾಂಗ್ರೆಸ್ ಪಕ್ಷದಲ್ಲೋ? ಅಂತ ಕೇಳಿದರೆ ಅವರಿಂದ ಸ್ಪಷ್ಟ ಉತ್ತರವಿಲ್ಲ. ಎಲ್ಲವನ್ನೂ ಈಗಲೇ ಹೇಳಿಬಿಟ್ಟರೆ ಕುತೂಹಲ ನಾಶವಾಗುತ್ತದೆ ಎನ್ನುತ್ತಾರೆ. ಅವರ ‘ಕ್ರಾಂತಿ’ ಯ ಮಾತುಗಳಿಗೆ ವಿರೋಧ ಪಕ್ಷದ ನಾಯಕರು ತಮಗೆ ತೋಚಿದ ವಿಶ್ಲೇಷಣೆಗಳನ್ನು ನೀಡುತ್ತಿದ್ದಾರೆ. ಯಾವುದು ಸರಿ ಯಾವುದು ತಪ್ಪು? ಎಂದು ಈಗ ಇಡೀ ಕರ್ನಾಟಕದಲ್ಲಿ ಈ ‘ಆಗಸ್ಟ್ ಕ್ರಾಂತಿ’ ಸ್ಫೋಟಕ ಹೇಳಿಕೆ ರಾಜಕೀಯ ಕುತೂಹಲ ಹೆಚ್ಚಿಸಿದೆ.
ರಾಜ್ಯ ರಾಜಕೀಯ ಕುತೂಹಲ ಹೆಚ್ಚಿಸಿದ ಸಚಿವ ಕೆ.ಎನ್ ರಾಜಣ್ಣರ ‘ಆಗಸ್ಟ್ ಕ್ರಾಂತಿ’ ಹೇಳಿಕೆ!
