ಅಪರಾಧ ಸಿನಿಮಾ ಸುದ್ದಿ

ಬುದ್ದಿ ಹೇಳಿದ ವ್ಯಕ್ತಿಯ ಕುತ್ತಿಗೆ ಕೊಯ್ದ ಡಿ ಬಾಸ್ ಅಭಿಮಾನಿಗಳು: ರಾಮನಗರದಲ್ಲಿ ದರ್ಶನ್ ಅಭಿಮಾನಿಗಳ ಪುಂಡಾಟ

Share It

ರಾಮನಗರ: ರೇಣುಕಾಸ್ವಾಮಿ ಕೊಲೆ ವಿಚಾರದಲ್ಲಿ ಪ್ರಮುಖ ಆರೋಪಿಯಾಗಿ ಸಿಲುಕಿಕೊಂಡ ನಟ ದರ್ಶನ್ ಜೈಲಿಗೆ ಕಾಲಿಟ್ಟು ಕುಖ್ಯಾತ ಶತದಿನಗಳು ಕಳೆದು ಹೋಗಿವೆ. ಅಧಿಕೃತ ಹೆಂಡತಿಯಲ್ಲದ ಮತ್ತೊಬ್ಬ ಮಹಿಳೆಗೋಸ್ಕರ ಪಾಪ ಕೃತ್ಯಕ್ಕೆ ಕೈ ಹಾಕಿ ಇಡೀ ರಾಜ್ಯದ ಜನರಿಂದ ಛಿಮಾರಿ ಹಾಕುವ ಸನ್ನಿವೇಶ ಸೃಷ್ಟಿಸಿಕೊಂಡಿದ್ದಾರೆ.

ಈ ಮಧ್ಯದಲ್ಲಿ ಕೆಲವು ಅಭಿಮಾನಿಗಳು ನಮ್ಮ ಬಾಸ್ ಏನು ಮಾಡಿದರು ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಅವರಿವರನ್ನು ತೇಜೋವದೆ ಮಾಡುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

ಇಂತಹ ದುಃಖದ ದಿನಗಳಲ್ಲಿ ಶುಕ್ರವಾರ ಸೆಪ್ಟೆಂಬರ್ 26 ರಂದು ರಾಮನಗರದಲ್ಲಿ ಕಟ್ಟಡ ಕಾರ್ಮಿಕರ ಮೇಸ್ತ್ರಿಯಾಗಿದ್ದ ವೆಂಕಟಾಸ್ವಾಮಿ ಎಂಬ ವ್ಯಕ್ತಿಯು ಹೊಸ ಕಟ್ಟಡ ಕಟ್ಟುತ್ತಿರುವ ಸ್ಥಳದ ಪಕ್ಕದಲ್ಲಿ ಒಂದು ಟೆಂಟ್ ಅಲ್ಲಿ ಮಲಗಿದ್ದರು.

ಆ ಜಾಗದಲ್ಲಿ ಕೆಲವು ದರ್ಶನ್ ಅಭಿಮಾನಿಗಳು “‘ಜೈ ಡಿಬಾಸ್, ದರ್ಶನ್ಗೆ ಜೈ ” ಎಂದು ಕೂಗುತ್ತಿದ್ದನ್ನು ನೋಡಿ ಬುದ್ಧಿವಾದ ಹೇಳಿದ ವೆಂಕಟಸ್ವಾಮಿಯವರಿಗೆ ಇಬ್ಬರು ದರ್ಶನ್ ಅಭಿಮಾನಿಗಳು ಹಲ್ಲೆ ನಡಿಸಿರುವುದು ಬೆಳಕಿಗೆ ಬಂದಿದೆ.

ಕಿರಣ ಎಂಬುವನು ಕುತ್ತಿಗೆಗೆ ಚಾಕು ಹಾಕಿದ್ದಾನೆ, ಹಾಗೂ ಮಹದೇವ್ ಎಂಬುವ ಡಿ ಅಭಿಮಾನಿ ದೈಹಿಕವಾಗಿ ಹಲ್ಲೆ ಮಾಡಿದ್ದಾನೆ. ತದನಂತರ ನಿವಾಸಿಯಾಗಿದ್ದ ಕಾಳಯ್ಯ ಬಂದು ಜಗಳ ಬಿಡಿಸಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ ಸದ್ಯ ಪ್ರಾಣಕ್ಕೆ ಏನು ಅಪಾಯವಿಲ್ಲ.


Share It

You cannot copy content of this page