ಸುದ್ದಿ

ಉದ್ಯೋಗಿಗೆ ಜಾತಿ ಕಿರುಕುಳ: ನ್ಯಾಯಾಲಯದ ಸೂಚನೆಯಂತೆ 16 ಜನರ ವಿರುದ್ಧ ಅಟ್ರಾಸಿಟಿ ಕೇಸ್

Share It

ಬೆಂಗಳೂರು: ಕಾರ್ಖಾನೆಯ ಉದ್ಯೋಗಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಸಿಬ್ಬಂದಿಯ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ.

ಯಲಹಂಕ ರೈಲ್ವೇ ಫ್ಯಾಕ್ಟರಿಯಲ್ಲಿ ಹಿರಿಯ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಬಸವಲಿಂಗಪ್ಪ, ಎಂಬುವವರು ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ 71 ನೇ ಸಿಎಚ್ ಎಚ್ ನ್ಯಾಯಾಲಯ, ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.

ರೈಲ್ವೇ ಫ್ಯಾಕ್ಟರಿಯಲ್ಲಿ ಬಡ್ತಿ ನೀಡದೆ ಸತಾಯಿಸಿದ್ದು ಸೇರಿದಂತೆ ಬಸವಲಿಂಗಪ್ಪ ಅವರಿಗೆ ವಿವಿಧ ರೀತಿಯ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಹೀಗಾಗಿ, ನಿಂಗೇಗೌಡ, ಅಬ್ದುಲ್ ಸೇರಿ 16 ಜನರ ವಿರುದ್ಧ ಪ್ರಕರಣ ದಾಖಲಿಸುವಂತೆ ಯಲಹಂಕ ನ್ಯೂ ಟೌನ್ ಪೊಲೀಸರರಿಗೆ ಸೂಚನೆ ನೀಡಿದೆ‌. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.


Share It

You cannot copy content of this page