ಸುದ್ದಿ

ಕರ್ನಾಟಕ ಬಂದ್: ಬೆಂಗಳೂರಿನಲ್ಲಿ ವಾಟಾಳ್ ತಂಡ ಪೊಲೀಸರ ವಶಕ್ಕೆ

Share It

ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್‌ ಪುಂಡರ ದೌರ್ಜನ್ಯ, ಕನ್ನಡ ಭಾಷಿಕರ ಮೇಲೆ ಮರಾಠಿಗರ ದೌರ್ಜನ್ಯ ಖಂಡಿಸಿ ವಾಟಾಳ್ ನಾಗರಾಜ್ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು. ರಾಜ್ಯಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇದೀಗ ವಾಟಾಳ್ ನಾಗರಾಜ್ ಅವರು ಟೌನ್ ಹಾಲ್‌ಗೆ ಆಗಮಿಸುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ. ಕನ್ನಡ ಪರ ಸಂಘಟನೆಗಳಿಗೆ ಅಭಿನಂದನೆಗಳು. ಎಲ್ಲಾ ಜಿಲ್ಲೆಗಳಲ್ಲಿ ಅವರದೇ ಆದ ರೀತಿಯಲ್ಲಿ ಬಂದ್ ನಡೆದಿದೆ. ಕೆಲವೆಡೆ ಬಸ್ ಓಡಿಸುತ್ತಾ ಇದ್ದರೂ ಜನರ ಹಾಜರಾತಿ ಕಡಿಮೆ ಇತ್ತು. ಹೋಟೆಲ್‌ಗಳು ತೆರಿದಿದ್ದರೂ ಜನರ ಹಾಜರಾತಿ ಇಲ್ಲ. ಒಟ್ಟಾರೆ, ಕನ್ನಡ ಒಕ್ಕೂಟದ ಹೋರಾಟಗಾರರು ಕರೆದ ಬಂದ್ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಈ ಪರಿಸ್ಥಿತಿಯಲ್ಲಿ 3000 ಜನರನ್ನು ಪೊಲೀಸ್‌ಗಳು ಅರೆಸ್ಟ್ ಮಾಡಿದ್ದಾರೆ. ನಿನ್ನೆ ಸಿಕ್ಕಿದವರಿಗೂ ನೋಟಿಸ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ರಿಟೈರ್ ಆದ ನಂತರ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ. ಅವರು ನಮ್ಮ ಹೋರಾಟವನ್ನು ವೈಯುಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಕಮಿಷನರ್ ಬಂದ್ ಅನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆ ಇದ್ದರೂ, ನಮ್ಮ ಹೋರಾಟಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಬಂದ್ ಆಗಬಾರದು ಎಂದು ಅನೇಕರು ಪಿತೂರಿ ಮಾಡಿದ್ದಾರೆ. ನೈತಿಕತೆ ಬಗ್ಗೆ ಮಾತನಾಡುತ್ತಾರೆ, ಆದರೆ ಇದು ನೈತಿಕ ಬೆಂಬಲವೇನು ಎಂಬ ಪ್ರಶ್ನೆ ಇದೆ. ಹೋಟೆಲ್ ಮಾಲೀಕರು ದಣಿದಿದ್ದಾರೆ. ಎಲ್ಲಾ ಕೈಯಲ್ಲಿ ಪೊಲೀಸರೇ ಇದ್ದಾರೆ. ಆದರೂ, ಬಂದ್ ಯಶಸ್ವಿಯಾಗಿದೆ ಎಂದರು.

ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಾರಿ ಗೋವಿಂದ್ ಅವರು, ಕನ್ನಡಿಗರ ಬಗ್ಗೆ ಕಾಳಜಿ ಇಲ್ಲವೆಂಬದು ಸ್ಪಷ್ಟವಾಗಿದೆ. ಪೆನ್ ಡ್ರೈವ್ ಇಟ್ಟುಕೊಂಡು ಮಾತನಾಡುತ್ತಾರೆ. ನಮ್ಮ ಚಾಲಕರ ಬಗ್ಗೆ ಮಾತನಾಡುತ್ತಾರೆ. “ಸುಮ್ಮನೆ ಇದ್ದೀರಾ? ನೀವು ಗಂಡಸರಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆ ಉದ್ಧಾರವಾಗುವುದು ಕನ್ನಡಪರ ಹೋರಾಟಗಾರರಿಂದ ಮಾತ್ರ ಎಂದು ಹೇಳಿದರು.
!


Share It

You cannot copy content of this page