ಯಾದಗಿರಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ್ತ ಘಟನೆ ಬಗ್ಗೆ ವಿಪಕ್ಷ ನಾಯಕರು ರಾಜೀನಾಮೆ ಕೇಳುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಯಾದಗಿರಿ ಜಿಲ್ಲಾ ಉಸ್ತವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಬಿಜೆಪಿಯಲ್ಲಿ ಎಷ್ಟು ಜನರು ರಾಜೀನಾಮೇ ನೀಡಿದ್ದಾರೇ?
ಕಾಲ್ತುಳಿದ ಘಟನೆ ನಡೆದಿದ್ದು ವಿಷಾದಕರ. ಸರ್ಕಾರ ತನ್ನ ವೈಫಲ್ಯತೆಯನ್ನು ಒಪ್ಪಿಕೊಂಡಿದೆ. ಹೀಗಾಗಿ ಯಾರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೃತ ಶಿವಲಿಂಗನ ಕುಟುಂಬಕ್ಕೆ 25 ಲಕ್ಷ ಚೆಕ್ ವಿತರಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಇಂತಹ ಘಟನೆಗಳು ನಡೆದಾಗ ಯಾರ್ಯಾರು ರಾಜೀನಾಮೆ ನೀಡಿದ್ದಾರೆ? ಕುಂಭಮೇಳದಲ್ಲಿ ಜನರು ಸತ್ತಾಗ ಎಷ್ಟು ಜನರು ರಾಜೀನಾಮೆ ನೀಡಿದ್ದರು ಎಂದು ಪ್ರಶ್ನಿಸಿದ ಸಚಿವರು, ಬಿಜೆಪಿಯವರಿಗೆ ಮಾಡಲು ಏನು ಕೆಲಸವಿಲ್ಲ. ಅದಕ್ಕೆ ಇಂತಹದೆಲ್ಲ ರಾಜಕೀಯ ಮಾಡಿ ಬೆಳೆ ಬೆಯಿಸಿಕೊಳ್ಳಲು ಮುಂದಾಗುತ್ತಾರೆಂದು ವ್ಯಂಗ್ಯವಾಡಿದರು.
14 ರಂದು ಯಾದಗಿರಿಗೆ ಸಿಎಂ
ಈಗಾಗಲೇ ನಿಗದಿಯಾದಂತೆಯೇ ಜೂನ್ 14 ರಂದು ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಕೊನೆಗಳಿಗೆಯಲ್ಲಿ ಕಾರ್ಯಕ್ರಮ ಏನಾಗುತ್ತದೆ ಎಂದು ಹೇಳಲು ಆಗದು.
ಜೂನ್ 9 ರಂದು ನಿಗದಿಯಾಗಿದ್ದ ರಾಯಚೂರು ಕಾರ್ಯಕ್ರಮ ರದ್ದಾಗಿದೆ. ಇಲ್ಲಿ ನಾವು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೆ ಎಂದರು. ಬಂಜಾರ ಭವನದ ಮುಖಂಡರು ಬಂದು ಭೇಟಿ ಮಾಡಲಿ ಮುಖ್ಯಮಂತ್ರಿ ಅವರಿಂದ ಅದನ್ನು ಉದ್ಘಾಟಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದು ಸಚಿವರು ಹೇಳಿದರು.