ಅಪರಾಧ ರಾಜಕೀಯ ಸುದ್ದಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಹೋದರನ ಬಂಧನ: ಟಿಕೆಟ್ ಕೊಡಿಸಲು ಹಣ ಪಡೆದ ಆರೋಪ

Share It

ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಸಹೋದರ ಗೋಪಾಲ್ ಜೋಷಿ ಅವರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.

ವಿಜಯಪುರದ ನಾಗಾಠಾಣ ಕ್ಷೇತ್ರದ ಜೆಡಿಎಸ್ ನ ಮಾಜಿ ಶಾಸಕರಿಂದ 2 ಕೋಟಿ ಹಣ ಪಡೆದು, ಲೋಕಸಭೆ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಕೇಂದ್ರ ಸಚಿವರ ಸಹೋದರನ ಮೇಲೆ ಬಂದ ಆರೋಪವನ್ನು ಕಾಂಗ್ರೆಸ್ ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಇದೀಗ ಗೋಪಾಲ್ ಜೊಷಿ ಬಂಧನವಾಗಿದ್ದು, ಅವರು ಯಾರ ಹೆಸರೇಳಿ ಹಣ ಪಡೆದಿದ್ದಾರೆ? ಎಂಬಿತ್ಯಾದಿ ಅಂಶಗಳೆಲ್ಲ ಹೊರಬರಬೇಕಿದೆ. ಇದು ಬಿಜೆಪಿಗೆ ತಲೆನೋವಾಗುವ ಸಾಧ್ಯತೆ ಕೂಡ ಇದೆ.

ಈ ನಡುವೆ ಜೋಷಿ, ತಮ್ಮ ಸಹೋದರ ಈಗಾಗಲೇ ನಮ್ಮಿಂದ ಬೇರೆಯಾಗಿದ್ದು, ಅವರಿಗೂ ನಮಗೂ ಸಂಬಂಧವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ವಿಚಾರಣೆಯಲ್ಲಿ ಜೋಷಿ ಹೆಸರು ಪ್ರಸ್ತಾಪವಾದರೆ, ಅವರಿಗೆ ಮುಜುಗರವಾಗಲಿದೆ.


Share It

You cannot copy content of this page