ಸುದ್ದಿ

ಕನ್ನಡ ಸಾಹಿತ್ಯ ರಥಕ್ಕೆ ಅದ್ದೂರಿಯ ಸ್ವಾಗತ

Share It


ಗಂಗಾವತಿ: ಮಂಡ್ಯದಲ್ಲಿ ಡಿಸೆಂಬರ್ 20 , 21 ಮತ್ತು 22 ರಂದು ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗಂಗಾವತಿ ನಗರಕ್ಕೆ ಆಗಮಿಸಿದ್ದ ಕನ್ನಡದ ರಥವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ನಂತರ ರಥವನ್ನು ಗಂಗಾವತಿ ನಗರದ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ಮುಖಾಂತರ ಬೀಳ್ಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಗಂಗಾವತಿ ತಹಶೀಲ್ದಾರ್, ನಗರಸಭೆ ಸದಸ್ಯರಾದ ಮನೋಹರ ಸ್ವಾಮಿ ಹಿರೇಮಠ, ಗಂಗಾವತಿ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷರು ಸೈಯದ್ ಇಲಿಯಾಸ್ ಖಾದ್ರಿ ಹಾಗೂ ಕನ್ನಡಪರ ಸಂಘಟನೆಗಳು ಭಾಗವಹಿಸಿದರು..


Share It

You cannot copy content of this page