ಬೆಂಗಳೂರು: ನಾಗಶೆಟ್ಟಿ ಹಳ್ಳಿಯ ಆರಾಧನಾ ನೃತ್ಯ ಶಾಲೆಯ ವತಿಯಿಂದ ಗೋಕುಲಾಷ್ಠಮಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಸೋಮವಾರ ಸಂಜೆ 7 ಘಂಟೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಮುನೇಗೌಡ, ಸಮಾಜ ಸೇವಕರು ಭಾಗವಹಿಸಿದ್ದರು.
ವಿದುಷಿ ನಿಖಿಲ ರಾವ್ ಮತ್ತು ತಂಡದವರಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಸಂಜಯನಗರದ ಗಾಯತ್ರಿ ಮಂದಿರ ಸಂಜಯನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರು ಭಾಗವಹಿಸಿದ್ದರು.