ಬೆಳಗಾವಿ : ಮುಂದಿನ ವರ್ಷದ ಜಾತ್ರೆ ಬರುವ ಮುಂಚೆ ನಮ್ಮ ಅತ್ತೆ ಸಾವನ್ನಪ್ಪಬೇಕು ಎಂದು ದೇವರ ಹುಂಡಿಗೆ ಪತ್ರ ಬರೆದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸೊಸೆ ಅಥವಾ ಅಳಿಯ ಈ ಚೀಟಿ ಬರೆದು ಹಾಕಿರಬಹುದು. ರಾಯಬಾಗ ತಾಲೂಕು ಕಣದಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಹುಲಿ ಕಾಂತೇಶ್ವರ ಜಾತ್ರಾ ಸಮಿತಿಯವರು ಹುಂಡಿ ಎಣಿಕೆ ಮಾಡುವ ಸಂದರ್ಭದಲ್ಲಿ ಈ ಪತ್ರ ಸಿಕ್ಕಿದೆ.
ಅತ್ತೆಯ ಕಾಟದಿಂದ ಬೇಸತ್ತು ದೇವರ ಹುಂಡಿಗೆ ನೂರು ರೂಪಾಯಿ ಮತ್ತು 10 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಈ ಚೀಟಿ ಬರೆದು ಹಾಕಿ ಹರಕೆ ಹೊತ್ತಿದ್ದಾರೆ. ಸೊಸೆ ಇಲ್ಲವೇ ಅಳಿಯ ಅತ್ತೆಯ ಕಾಟದಿಂದ ಬೇಸತ್ತು ಈ ರೀತಿ ದೇವರಲ್ಲಿ ಹರಕೆ ಹೊತ್ತಿರಬಹುದು.

