ಬೆಂಗಳೂರು: ಚಿತ್ರದುರ್ಗ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರವನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ.
ಘಟನೆಯಲ್ಲಿ ಟ್ರಕ್ ಡ್ರೈವರ್ ಸೇರಿ ಐವರು ಮೃತಪಟ್ಟಿದ್ದಾರೆ. ಇನ್ನೂ ಮೂವರ ಪತ್ತೆಯಾಗಿಲ್ಲ. ಆ ಮೂವರು ಮೃತಪಟ್ಟಿರಿವ ಬಗ್ಗೆ ಯಾವುದೇ ಕುರುಹು ಲಭ್ಯವಾಗಿಲ್ಲ. ಬಸ್ಸಿನಿಂದ ಜಿಗಿದು, ಆಸ್ಪತ್ರೆಗೆ ದಾಖಲಾಗಿರಬಹುದು ಎಂಬ ಅನುಮಾನವಿದೆ.

