ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ನಿದ್ರೆಗೆಟ್ಟ ದರ್ಶನ್

Share It

ಬಳ್ಳಾರಿ ಸೆಂಟ್ರಲ್ ಜೈಲಿಗೆ ನಿನ್ನೆ ಗುರುವಾರ ನಸುಕಿನ‌ ಜಾವ 4.30 ಕ್ಕೆ ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-2 ಆರೋಪಿ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕರೆತಂದಿದ್ದರು.

ಆದರೆ ನಿನ್ನೆ ಮಧ್ಯಾಹ್ನ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಮಧ್ಯಾಹ್ನದ ಜೈಲಿನ ಊಟ ಸೇವಿಸದೆ ಉಪವಾಸ ಇದ್ದ ದರ್ಶನ್ ಕೊನೆಗೂ ಸಂಜೆ 7 ಗಂಟೆಗೆ ರಾತ್ರಿಯ ಊಟ ಸೇವಿಸಿದರು. 2 ಚಪಾತಿ-ಪಲ್ಲೆ, ಅನ್ನ-ಸಾಂಬಾರು, ಮಜ್ಜಿಗೆ ಇದು ದರ್ಶನ್ ಅವರಿಗೆ ಕಳೆದ ರಾತ್ರಿ ನೀಡಿದ ಬಳ್ಳಾರಿ ಜೈಲಿನ ಊಟ‌ವಾಗಿತ್ತು.

ಆದರೆ ಮಧ್ಯರಾತ್ರಿ 1 ಗಂಟೆಯವರೆಗೂ ಏನೋ ಯೋಚನೆ ಮಾಡುತ್ತಾ 12×6 ಸುತ್ತಳತೆಯ ಸೆಲ್ ನಲ್ಲಿ ನಿದ್ರೆ ಮಾಡದೆ ಹಾಗೆ ಕುಳಿತಿದ್ದ ದರ್ಶನ್ ನಂತರ ಮಲಗಿದರು. ಬೆಳಗ್ಗೆ ಎದ್ದು ಸೆಲ್ ನೊಳಗಿದ್ದ ಅಟ್ಯಾಚ್ ಟಾಯ್ಲೆಟ್ ನಲ್ಲಿ ಶುದ್ಧಿಯಾದ ಮೇಲೆ ದರ್ಶನ್ ಅವರಿಗೆ ಜೈಲಿನ ನಿಯಮದಂತೆ ಬೆಳಗ್ಗೆ ಉಪಹಾರ ರೂಪವಾಗಿ ಉಪ್ಪಿಟ್ಟು ನೀಡಲಾಯಿತು.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸದ್ಯ ಖೈದಿ ನಂಬರ್ 511 ಆಗಿ ದರ್ಶನ್ ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದಾರೆ.


Share It

You May Have Missed

You cannot copy content of this page