ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ( NIA) ವಹಿಸಲು ಸರಕಾರ ತೀರ್ಮಾನಿಸಿದೆ.
ಈ ಮಹತ್ವದ ಆದೇಶವನ್ನು ಗೃಹ ಸಚಿವಾಲಯ ಹೊರಡಿಸಿದ್ದು, ಪ್ರಕರಣವನ್ನು ಎನ್ ಐಎ ಇನ್ನು ಮುಂದೆ ನಿಭಾಯಿಸಲಿದೆ ಎಂದು ಹೇಳಲಾಗಿದೆ. ಕರಾವಳಿಯಲ್ಲಿ ನಡೆದ ಈ ಕೊಲೆ ಪ್ರಕರಣ ಎರಡು ಗುಂಪುಗಳ ನಡುವಿನ ವೈಷಮ್ಯಕ್ಕೆ ಕಾರಣವಾಗಿತ್ತು. ಈ ಕೊಲೆಗೆ ಪ್ರತೀಕಾರವಾಗಿ ಮತ್ತೊಂದು ಮುಸ್ಲಿಂ ಯುವಕನ ಕೊಲೆಯೂ ನಡೆದಿತ್ತು.