ಸುದ್ದಿ

ಆಡುಗೋಡಿ ವಾರ್ಡ್ ನಲ್ಲಿ 1 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ

Share It

ಬೆಂಗಳೂರು: ಆಡುಗೋಡಿ ವಾರ್ಡ್ ನಲ್ಲಿ ಒಂದು ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಭಾನುವಾರ ಚಾಲನೆ ನೀಡಿದರು.

ಆಡುಗೋಡಿ ವಾರ್ಡಿನ ರಾಜೇಂದ್ರನಗರದ 1ನೇ, 4ನೇ ಮತ್ತು 7ನೇ ಮೇನ್ ರಸ್ತೆಗಳನ್ನು ಹಾಗೂ 6ನೇ, 9ನೇ, 13ನೇ ಮತ್ತು 15ನೇ ಅಡ್ಡ ರಸ್ತೆಗಳನ್ನು ಸುಮಾರು ₹1 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ನಡೆಸಲಾಗುತ್ತಿದೆ. ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಸ್ಥಳೀಯರು ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಕಾಮಗಾರಿಯನ್ನು ರಾಮಲಿಂಗಾ ರೆಡ್ಡಿ ಅವರು ಪೂಜೆ ಮಾಡುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್‌ ಮರುಗೇಶ್ ಮೊದಲಿಯಾರ್, ರಾಜೇಂದ್ರನಗರದ ಸಂಪತ್ ಹಾಗೂ ರಾಜೇಂದ್ರನಗರದ ಹಿರಿಯ ನಾಯಕರು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


Share It

You cannot copy content of this page