ಧಾರವಾಡ: ಜಿಲ್ಲೆಯ ಪ್ರವಾಸ ಕೈಗೊಂಡಿರುವ ಮಾನ್ಯ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ್ ಲಾಡ್ ರವರು ಇಂದು ಕೂಡ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಿದರು.
ಹುಬ್ಬಳ್ಳಿ, ಹೆಬಸೂರ, ಅರೆಕುರಹಟ್ಟಿ, ಯಮನೂರ, ಎಸ್.ಎಸ್.ಬಾಗಿ ಶಾಲೆ ಪ್ರದೇಶ ಹಾಗೂ ನವಲಗುಂದದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಹಾಗೂ ಇತರ ಸಮಸ್ಯೆಗಳ ಬಗ್ಗೆ ಪರಿವೀಕ್ಷಣೆ ಮಾಡಿ ಮಾನ್ಯ ಸಚಿವರು, ಅಲ್ಲಿನ ನಿವಾಸಿಗಳು ನೀಡಿದ ಅಹವಾಲುಗಳನ್ನು ಸ್ವೀಕರಿಸಿದರು.
ಸ್ಥಳೀಯ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ವಿಶೇಷ ಕ್ರಮ ಜರುಗಿಸುವುದಾಗಿ ಮಾನ್ಯ ಸಚಿವರು ಅತೀವೃಷ್ಟಿಗೆ ಒಳಗಾದ ಪ್ರದೇಶದ ನಿವಾಸಿಗಳಿಗೆ ಅಭಯ ನೀಡಿದರು.
ಈ ಸಂಧರ್ಭದಲ್ಲಿ ನವಲಗುಂದ ಕ್ಷೇತ್ರದ ಶಾಸಕರಾದ ಶ್ರೀ ಎನ್.ಹೆಚ್.ಕೋನರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.