ರಾಜಕೀಯ ಸುದ್ದಿ

ರಾಜ್ಯಪಾಲರ ವಿರುದ್ದ ಐವಾನ್ ಡಿಸೋಜ ಹೇಳಿಕೆ: ಬಿಜೆಪಿಯಿಂದ ಪ್ರತಿಭಟನೆ

Share It

ಮಂಗಳೂರು; ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಅವಹೇಳನಕಾರಿ ಹಾಎಳಿಕೆ ನೀಡುತ್ತಿದ್ದು, ಐವಾನ್ ಡಿಸೋಜಾ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿದೆ.

ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಐವಾನ್ ಡಿಸೋಜ ವಿರುದ್ಧ ಐಫ್ ಐಆರ್ ದಾಖಲು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಆಗಮಕ್ಕೆ ಪಟ್ಟು ಹಿಡಿದು ಕೆಲಕಾಲ ಗೊಂದಲ ಮೂಡಿಸಿದರು.

ಸ್ಥಳಕ್ಕೆ ಆಗಮಿಸಿದ ಮಂಗಳೂರು ಎಸ್ ಪಿ ಪ್ರತಾಪ್ ಸಿಂಹ ರಾಥೋಡ್ ಬಿಜೆಪಿ ಕಾರ್ಯಕರ್ತರನ್ನು ಮನವೊಲಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು. ಅನಂತರ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.


Share It

You cannot copy content of this page