ಹುಬ್ಬಳ್ಳಿ :- ಶರಣರು ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಬೇಕಾಗುವ ಮೌಲ್ಯಗಳನ್ನು ನೀಡಿದವರು, ಶರಣ ಸಾಹಿತ್ಯ ಎಲ್ಲ ಕಾಲಕ್ಕೂ ಎಲ್ಲ ವರ್ಗಕ್ಕೂ ಪ್ರಸ್ತುತವಾಗುವ ಅಂಶಗಳನ್ನು ಒಳಗೊಂಡಿದೆ 12 ನೇ ಶತಮಾನದ ಬಸವಣ್ಣನವರು ವಿಶ್ವದ ಎಲ್ಲ ದಾರ್ಶನಿಕರ ಮುಖವಾಣಿಯಾಗಿದ್ದಾರೆ ಎಂದು ಡಾ. ಸಂಗಮನಾಥ ಲೋಕಾಪುರ ಹೇಳಿದರು.
ಹುಬ್ಬಳ್ಳಿಯಲ್ಲಿ 892 ನೇ ಬಸವ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ವಚನ ಗಾಯನ ಹಾಗೂ ಕಾವ್ಯ ಗೋಷ್ಠಿ ಸಮಾರಂಭದ ವರದಿ.
ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ವಿಶ್ವ ಸಾಹಿತ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಡಾ.ಸಂಗಮನಾಥ ಲೋಕಾಪುರ ಅವರು ಹುಬ್ಬಳ್ಳಿ ಡಾ.ಕೆ ಎಸ್ ಶರ್ಮಾ ಕ್ಯಾಂಪಸ್ ಸಂಜೀವಿನಿ ಆಯುರ್ವೇದ ಮೆಡಿಕಲ್ ಕಾಲೇಜ್ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು
ತಾಲ್ಲೂಕು ಘಟಕ ಹುಬ್ಬಳ್ಳಿ ಶಹರ ಹಾಗೂ ಹುಬ್ಬಳ್ಳಿ ಗ್ರಾಮೀಣ ಘಟಕಗಳು ಏರ್ಪಡಿಸಿದ್ದ ಮಹಾನ್ ಮಾನವತಾವಾದಿ ನಾಡಿನ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ 892 ನೇ ಜಯಂತಿ ಪ್ರಯುಕ್ತ
ವಚನ ಗಾಯನ ಹಾಗೂ ಕಾವ್ಯ ಗೋಷ್ಠಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ ಅವರು ಜಾತಿರಹಿತ ಸಮ ಸಮಾಜದ ನಿರ್ಮಾಣಕ್ಕೆ 12 ನೇ ಶತಮಾನದಲ್ಲಿಯೇ ಬಸವಾದಿ ಶರಣರು ಭದ್ರ ಬುನಾದಿ ಹಾಕಿದ್ದರು ಅಸ್ಪೃಶ್ಯತೆ , ಅಸಮಾನತೆ , ಅಂಧಕಾರ , ಅಜ್ಞಾನ , ಮೂಢ ನಂಬಿಕೆಗಳನ್ನು ಹೋಗಲಾಡಿಸಲು ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ದೊಡ್ಡ ಕ್ರಾಂತಿಯನ್ನೇ ಮಾಡಿದರು ಹಾಗಾಗಿ ವಚನಗಳು ಜಗತ್ತಿನ ಎಲ್ಲ ಭಾಷೆಗಳಿಗೆ ಅನುವಾದ ಆಗಬೇಕು ಮತ್ತು ಕರ್ನಾಟಕ ಸರ್ಕಾರ ಆದಷ್ಟು ಬೇಗ ವಚನ ವಿಶ್ವ ವಿದ್ಯಾಲಯ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತರಾದ ಗಣಪತಿ ಗಂಗೊಳ್ಳಿಯವರು ಮಾತನಾಡಿ ಬಸವಾದಿ ಶರಣರು ನುಡಿದಂತೆ ನಡೆದು ಕಾಯಕ ಮತ್ತು ದಾಸೋಹ ನಿಷ್ಠೆ ತೋರಿ ತಮ್ಮ ಬದುಕಿನುದ್ದಕ್ಕೂ ಸಾಮಾಜಿಕ ಬದ್ಧತೆ ಸಮಾನತೆಗೆ ಹೋರಾಡಿ ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಲ್ಲಿ ಅರಿವು ಮಾನವೀಯ ಮೌಲ್ಯಗಳನ್ನು ಬಿತ್ತಿದರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಜಿಲ್ಲಾ ಲಿಂಗಾಯತ ಮಹಾಸಭಾ ಅಧ್ಯಕ್ಷರ ಎಸ್ ಬಿ ಜೋಡಳ್ಳಿ , ಜಾನಪದ ವಿದ್ವಾಂಸರಾದ ಡಾ.ರಾಮು ಮೂಲಗಿ , ಹುಬ್ಬಳ್ಳಿಯ ಬಸವ ಕೇಂದ್ರದ ಕಾರ್ಯಾಧ್ಯಕ್ಷ ಪ್ರೋ.ಎಸ್ ವ್ಹಿ ಪಟ್ಟಣಶೆಟ್ಟಿ , ಲೆಕ್ಕ ಪರಿಶೋಧಕ ನಟರಾಜ ಮೂರಶಿಳ್ಳಿಯವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಕಾನೂನು ವಿಶ್ವ ವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಹೆಚ್ ವ್ಹಿ ಬೆಳಗಲಿ , ಸಂಜೀವಿನಿ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಸಿ ಸಿ ಹಿರೇಮಠ , ಸಮಾಜ ಸೇವಕ ಶಶಿಧರ ಕಿನ್ನಾಳ ಹಾಗೂ ಹುಬ್ಬಳ್ಳಿ ಅಕ್ಕನ ಬಳಗದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಅಂಗಡಿ ಅವರುಗಳು ಅತಿಥಿಗಳಾಗಿ ಆಗಮಿಸಿದ್ದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹುಬ್ಬಳ್ಳಿ ಶಹರ ಘಟಕ ತಾಲ್ಲೂಕು ಅಧ್ಯಕ್ಷ ಗುರುಸಿದ್ದಪ್ಪ ಎಂ ಬಡಿಗೇರ ಹಾಗೂ ಹುಬ್ಬಳ್ಳಿ ಗ್ರಾಮೀಣ ಘಟಕ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸಿದ್ರಾಮಪ್ಪ ಶಿವಳ್ಳಿ , ಪತ್ರಕರ್ತ ಡಾ.ವೀರೇಶ ಹಂಡಿಗಿ ,ಡಾ.ಸುರೇಶ ಹೊರಕೇರಿ , ಡಾ.ಹೆಚ್ ಬಿ ಕೊರವರ , ಮನೋಹರ ಮಿಸ್ಕಿನ್ , ಎಸ್ ವ್ಹಿ ಬಿದರಳ್ಳಿ , ಮಲ್ಲಿಕಾರ್ಜುನ ಚ ಕಮ್ಮಾರ , ಹನುಮಂತ ಹಿರೇಮನಿ , ಯಾಶೀನ್ ರಾಣೆಬೆನ್ನೂರ ಪತ್ರಕರ್ತ ಎಂ ಆರ್ ನದಾಪ್ , ಶಿವಾನಂದ ಬೆಂಗೇರಿ , ಬಸವರಾಜ ಕಮಡೊಳ್ಳಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಉದಯೋನ್ಮುಖ ಸಂಗೀತಗಾರ್ತಿ ಕು.ಪ್ರಿಯಾ ಎಂ ಹುಂಬಿ, ಆಕಾಶವಾಣಿ ಕಲಾವಿದೆ ಲೀಲಾವತಿ ಮೋರೆ , ಡಾ.ರಾಮು ಮೂಲಗಿ , ಮಂಜುನಾಥ ಹುಂಬಿ , ವಿಜಯಕುಮಾರ ಅರ್ಕಸಾಲಿ , ಸಿದ್ದಾರ್ಥ ಎಂ ಹುಂಬಿಯವರು ವಚನ ಗಾಯನ ಪ್ರದರ್ಶನ ನೀಡಿದರು.
ಬಸವಾದಿ ಶರಣರ ಜೀವನಾದರ್ಶಗಳು , ತತ್ವಗಳು , ಶರಣ ಸಂಸ್ಕ್ರತಿ , ವಚನ ಸಾಹಿತ್ಯದ ಕುರಿತಾಗಿ ರಚಿಸಿದ ಕವಿತೆಗಳನ್ನು ಕಾವ್ಯಗೋಷ್ಠಿಯಲ್ಲಿ ಹುಬ್ಬಳ್ಳಿ ಶಹರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಆಗಮಿಸಿದ್ದ ಕವಿಗಳಾದ ಶರೀಪ್ ಚಿಗಳ್ಳಿ,ಪಾರ್ವತಿ ಕಂಬಳಿ , ವಿದ್ಯಾ ಹೊರಗಿನಮಠ , ವಂದನಾ ಕರಾಳೆ , ಪತ್ರಕರ್ತ ದಾನೇಶ್ ಬುರುಡಿ , ೭ಸರೋಜಾ ಮೇಟಿ , ಜ್ಯೋತಿ ಚಿನಗುಡಿ , ರಾಮಚಂದ್ರ ಪತ್ತಾರ , ಸುಮಾ ಹಡಪದ , ಡಾ.ಶಿವಯೋಗಪ್ಪ ಎಮ್ಮಿ , ಪದ್ಮಜಾ ಉಮರ್ಜಿ ,
ಸಂಧ್ಯಾ ದಿಕ್ಷೀತ , ಡಾ.ರಂಗನಾಥ ವಾಲ್ಮೀಕಿ , ಸವಿತಾ ನೆಲ್ಲಿಗಣಿ , ಯಶೋದಾ ಸೋಲಾರಗೊಪ್ಪ , ಜವಾಹರ ಧ ಕನ್ನೂರ , ವಿದ್ಯಾ ಭಗವತಿ , ಗಿರೀಶ ಮುಕ್ಕಲ್ , ಗುರುಲಿಂಗ ಉಣಕಲ್ , ಪುಷ್ಪಾ ಮ ಬಿದರಳ್ಳಿ, ಆರತಿ ಎನ್ ರಾವ್ , ಅನಸುಯಾ ಅರಕೇರಿ , ಶಾಲಿನಿ ರುದ್ರಮುನಿ , ವಸಂತ ಅಗಸಿಮನಿ , ಶಿಶಿರ ಪಾಟೀಲ್, ಮಲ್ಲಿಕಾರ್ಜುನ ಅಂಗಡಿಯವರು ವಾಚಿಸಿದರು.
ಕವಯಿತ್ರಿ ಪಾರ್ವತಿ ಕಂಬಳಿ ಅವರು ಕವಿಗೋಷ್ಟಿ ನಿರ್ವಹಣೆ ಮಾಡಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಹುಬ್ಬಳ್ಳಿ ಶಹರದ ಅಧ್ಯಕ್ಷ ಗುರುಸಿದ್ದಪ್ಪ ಎಂ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಪ್ರಿಯಾ ಹುಂಬಿ ಪ್ರಾರ್ಥಿಸಿದರು , ಕಾರ್ಯದರ್ಶಿ ಮಲ್ಲಿಕಾರ್ಜುನ ಕಮ್ಮಾರ ನಿರೂಪಿಸಿದರು, ಪತ್ರಕರ್ತ ಡಾ. ವೀರೇಶ್ ಹಂಡಿಗಿ ಸ್ವಾಗತಿಸಿದರು. ಕೊನೆಯಲ್ಲಿ ಪತ್ರಕರ್ತ ಎಂ ಆರ್ ನದಾಪ್ ವಂದಿಸಿದರು