ಬೆಂಗಳೂರು: ಆರ್ಸಿಬಿ ಕ್ರಿಕೆಟ್ ಕ್ರೇಜ್ ಅಷ್ಟಿಷ್ಟಲ್ಲ. ಅದರಲ್ಲೂ ಈ ಬಾರಿಯ ಐಪಿಎಲ್ನಲ್ಲಿ ತಂಡದ ಪ್ರದರ್ಶನ ನೋಡಿದ ಮೇಲೆ ಜನ ಇನ್ನಷ್ಟು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದೀಗ ಫೈನಲ್ ತಲುಪಿರುವ ಆರ್ಸಿಬಿ ಅಭಿಮಾನಿಯೊಬ್ಬ ಸಿಎಂಗೆ ಪತ್ರ ಬರೆದಿದ್ದಾನೆ.
ಆ ಅಭಿಮಾನಿ ಬರೆದಿರುವ ಪತ್ರದಲ್ಲಿ ಆರ್ಸಿಬಿ 18 ವರ್ಷಗಳ ಅಭಿಮಾನಿಗಳ ಆಸೆಯನ್ನು ಈಡೇರಿಸಿದೆ. ಇದೀಗ ಫೈನಲ್ ತಲುಪಿದೆ. ಫೈನಲ್ ಪಂದ್ಯದಲ್ಲಿಯೂ ಗೆದ್ದು ಕಪ್ ನಮ್ಮದಾಗಲಿದೆ. ಈ ಸಂಭ್ರಮಾಚರಣೆಯನ್ನು ಸವಿನೆನಪಾಗಿಸುವಂತೆ ಅಂದು ಇಡೀ ದಿನ ಆರ್ಸಿಬಿ ಹಬ್ಬ ಆಚರಣೆಗೆ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾನೆ.
ಮುಂದುವರಿದು, ಅಂದು ಕನ್ನಡ ರಾಜ್ಯೋತ್ಸವದಂತೆ ಪ್ರತಿ ವರ್ಷ ಆರ್ಸಿಬಿ ಹಬ್ಬ ಆಚರಿಸುವಂತೆ ಮನವಿ ಮಾಡಿರುವುದಲ್ಲದೆ, ಅಂದು ಒಂದು ದಿನ ಸರಕಾರಿ ರಜೆ ಘೋಷಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾನೆ. ಇದೀಗ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ತರೇಹವಾರಿ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.