ಬಿಎಂಟಿಸಿ ನಿರ್ವಾಹಕ, ಚಾಲಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

Share It

ಬೆಂಗಳೂರು:ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಟ್ಯಾನರಿ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.

ನಿರ್ವಾಹಕ ಶಿವಕುಮಾರ್ ಮತ್ತು ಚಾಲಕ ಗಗನ್​ ಹಲ್ಲೆಗೊಳಗಾದವರು. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಶನಿವಾರ ಸಂಜೆ 3:40ರ ಸುಮಾರಿಗೆ ಬಿಎಂಟಿಸಿ 290E ಎಲೆಕ್ಟ್ರಿಕ್ ಬಸ್ ಯಲಹಂಕದಿಂದ ಶಿವಾಜಿನಗರಕ್ಕೆ ಹೊರಟಿತ್ತು.

ಸಂಜೆ 5.25ಕ್ಕೆ ಟ್ಯಾನರಿ ರಸ್ತೆಯಲ್ಲಿ ಕೆನರಾ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಯಾಗಿದೆ. ಈ ವೇಳೆ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ವಾಹನದ ಮುಂಭಾಗಲಿನಿಂದ ಒಳ ಬಂದು ಕರ್ತವ್ಯದಲ್ಲಿದ್ದ ಚಾಲಕ ಗಗನ್​ ಅವರಿಗೆ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈ ತಿರುವಿ, ಮುಖಕ್ಕೆ ಗುದ್ದಿದ್ದಾರೆ.

ಈ ವೇಳೆ ನಿರ್ವಾಹಕ ಶಿವಕುಮಾರ ತಡೆಯಲು ಹೋದಾಗ, ಅವರನ್ನು ಹೊರಗಡೆ ಎಳೆದು ಬಸ್ಸಿನ ಮುಂಭಾಗದಲ್ಲಿ ನಿಲ್ಲಿಸಿ ಥಳಿಸಿ ಮುಖ, ಕತ್ತು ಮತ್ತು ಸೊಂಟದ ಭಾಗಕ್ಕೆ ಗುದ್ದಿ ಹಲ್ಲೆ ಮಾಡಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಬೆಂಗಳೂರಿನ ಬಸ್ ಕಂಡಕ್ಟರ್​ ಮೇಲೆ ಹಲ್ಲೆ ನಡೆದಿರುವ ನಾಲ್ಕು ಘಟನೆ ನಡೆದಿದೆ.


Share It

You May Have Missed

You cannot copy content of this page