ನಿರಂತರ ಅತ್ಯಾಚಾರ ಎಸೆಗಿದ್ದ ವ್ಯಕ್ತಿಗೆ ಕಠಿಣ ಶಿಕ್ಷೆ

Share It

ಬೆಳಗಾವಿ : ನಾವಿಬ್ಬರು ಮದುವೆಯಾಗೋಣ. ನೀನು ಬಾರದಿದ್ದರೆ ನಾನು ಸಾಯುವೆ ಎಂದು ಹೇಳಿ ಬಾಲಕಿಯನ್ನು ಅಪಹರಿಸಿಕೊಂಡು ಬೆಂಗಳೂರಿಗೆ ಹೋಗಿ ರಸ್ತೆ ಬದಿಯೇ ತಾಳಿ ಕಟ್ಟಿ ಮದುವೆಯಾಗಿ ನಂತರ ನಿರಂತರ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಇದೀಗ ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 15,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ರಾಯಬಾಗ ತಾಲೂಕು ಹಿಡಕಲ್ ಗ್ರಾಮದ ಶ್ರೀಶೈಲ ಬಸವರಾಜ ಬಿಳ್ಳೂರು (28)ಶಿಕ್ಷೆಗೊಳಗಾದ ಯುವಕ. ಈತ 2017ರ ಜೂನ್ 27ರಂದು ಬಾಲಕಿಯನ್ನು ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದ. ನಂತರ ಅಲ್ಲೇ ರಸ್ತೆ ಬದಿ ತಾಳಿ ಕಟ್ಟಿ ನಿರಂತರ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಬಾಲಕಿಯ ಪೋಷಕರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದೀಗ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕ ಆರ್. ಜಿ. ದೇವರೆಡ್ಡಿ ಮತ್ತು ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.


Share It

You May Have Missed

You cannot copy content of this page