ಸುದ್ದಿ

ನವ ವಧು ವರರಲ್ಲಿ ಪರಸ್ಪರ ಇಬ್ಬರಲ್ಲಿ ಆತ್ಮ ಗೌರವವಿರಬೇಕು:ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಕರೆ

Share It

ಹರಪನಹಳ್ಳಿ:ಗಂಡ ಹೆಂಡತಿಯರಲ್ಲಿ ಪ್ರೀತಿ, ಪ್ರೇಮ, ವಿಶ್ವಾಸವಿರಬೇಕು, ಪರಸ್ಪರ ಇಬ್ಬರಲ್ಲಿ ಆತ್ಮ ಗೌರವವಿರಬೇಕು, ಸಂಬಂಧಿಕರಿಗೂ ಗೌರವವನ್ನ ನೀಡಿದರೆ ನಿಮ್ಮನ್ನು ಅವರು ಗೌರವಿಸುತ್ತಾರೆ ಎಂದು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಹೊಸ ವಧು ವರರಿಗೆ ಕಿವಿ ಮಾತು ಹೇಳಿದರು.

ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೋಲ ಶಾಂತೆಶ್ವರ ಮಠದಲ್ಲಿ ಬಸವ ಜಯಂತಿ ಪ್ರಯುಕ್ತ 41ನೇ ವರ್ಷದ ಸಾಮೂಹಿಕ ಮದುವೆದಲ್ಲಿ 34 ಜೋಡಿ ಈ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ವಧು ವರರನ್ನು ಉದ್ದೇಶಿಸಿ ಮಾತನಾಡಿದ ಅವರು ಹೊಸ ವಧುವರರು ತಂದೆ ತಾಯಿಗಳಿಗೆ, ಸಂಬಂಧಿಕರಿಗೆ, ಬಂಧು ಬಳಗಕ್ಕೆ ಪರಸ್ಪರ ಗೌರವಿಸಬೇಕು, ತಮ್ಮಲ್ಲಿ ಪ್ರೀತಿ, ವಿಶ್ವಾಸದ ಜೊತೆಗೆ ಆತ್ಮ ಗೌರವವಿರಬೇಕು, ಈ ಮಟ್ಟಕ್ಕೆ ಮೂರನೇ ಭಾರಿಗೆ ಬಂದಿದ್ದೇನೆ ಬಂದು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಈ ಮೂಲಕ ಶ್ರೀ ಗುರುಗಳ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕ್ರಿಯಾಶಿಲಾರಗಿ ಬಸವಣ್ಣನವರಂತ್ತೆ ಕಾಯಕಯೋಗಿಯಾಗಿ ಕೆಲಸದಲ್ಲಿ ತೊಡಗಿದ್ದಾರೆ.

ಎಸ್ಎಸ್ ಕೇರ್ ಟ್ರಸ್ಟ್ಯಿಂದ ಮೂರು ಸೇವೆಗಳನ್ನು ಉಚಿತವಾಗಿ ಸೇವೆಯನ್ನ ಸಲ್ಲಿಸುತ್ತಿದ್ದೇವೆ, ಕಿಡ್ನಿ ಸಮಸ್ಯೆ, ಗರ್ಭಿಯಣಿಗರಿಗೆ ಉಚಿತವಾಗಿ ತಪಾಸಣೆ ಹಾಗೂ ಕಣ್ಣಿನ ತಪಾಸಣೆಯನ್ನ ಈ ಟ್ರಸ್ಟ್ ನಿಂದ ನೀಡುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಮಠದ ವತಿಯಿಂದ ವೈದ್ಯಕೀಯ ಸೇವೆಯನ್ನು ಗುರುತಿಸಿ ಡಾ.ಎಸ್. ಎಂ. ಮಹೇಶ್ ಅವರಿಗೆ ಬಸವ ಗುರುಕಿರಣ ಪ್ರಶಸ್ತಿ, ವೃತ್ತಿರಂಗಭೂಮಿ ಸೇವೆಯನ್ನು ಗುರುತಿಸಿ ಡಾ. ಕೆ. ನಾಗರತ್ನಮ್ಮಗೆ ಕೋಲ ಶಾಂತೆ ಶ್ವರ ಸೇವಾ ಪ್ರಶಸ್ತಿ ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಸ್. ಎಂ. ಮಹೇಶ್ ನಾನು ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯವಾಗಿ ಸೇವೆ ಸಲ್ಲಿಸಿದಕ್ಕೆ ಕೋಲ ಶಾಂತೆ ಶ್ವರ ಮಠದ ಶ್ರೀ ಗುರುಗಳು ಬಸವ ಗುರುಕಿರಣ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ನನಗೆ ಬಹಳ ಸಂತಸವಾಗಿದೆ ನಾನು ಈ ಮಠಕ್ಕೆ ಚಿರಋಣಿಯಾಗಿರುತ್ತೇನೆ ಇನ್ನೂ ಹೆಚ್ಚಿನ ಜವಾಬ್ದಾರಿಯಿದೆ ಎಂದರು.

ಇನ್ನೂ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳು ಮಾತನಾಡಿ ನಮ್ಮ ಅರಸೀಕೆರೆ ಜನತೆಯ ಸಹಕಾರದಿಂದ 41 ವರ್ಷಗಳಿಂದ ಈ ಸೇವೆಯನ್ನು ಸಲ್ಲಿಸುವುದಕ್ಕೆ ಕಾರಣಕರ್ತಾರಾಗಿದ್ದಾರೆ, ಎಲ್ಲಾ ಸಮುದಾಯದ ಬೆಂಬಲದಿಂದ್ದ ಈ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದಿದೆ, ಒಟ್ಟು ಈ ಮೂಲಕ 3 ಸಾವಿರದ 46 ಸಾಮೂಹಿಕ ಮದುವೆಗಳಾಗಿವೆ ಎಂದರು.

ಅರಸೀಕೆರೆ ಮಂಜಣ್ಣ ಮಾತನಾಡಿ ನಮ್ಮ ಶ್ರೀ ಶಾಂತಲಿಂಗ ದೇಶೀಕೇಂದ್ರ ಮಹಾಸ್ವಾಮಿಗಳ ಆಶೀರ್ವಾದದಿಂದ್ದ ಇಂದು ನಮ್ಮ ಅರಸೀಕೆರೆಗ ಸಾಕಷ್ಟು ಅಭಿವೃದ್ಧಿಯಾಗಿದೆ ಈ ಸಂದರ್ಭದಲ್ಲಿ ನಮ್ಮೂರಿನ ಬಗ್ಗೆ ಹಾಗೂ ಇಡೀ ಎಲ್ಲಾ ಸಮುದಾಯವನ್ನ ಒಂದು ವೇದಿಕೆಯಲ್ಲಿ ಕಾಣುವ ಕೆಲಸ ಮಾಡುತ್ತಿದ್ದಾರೆ ನಮ್ಮ ಸ್ವಾಮಿಗಳು ಎಂದರು.

ಇನ್ನೂ ಅರಸೀಕೆರೆ ಮಾಜಿ ಗ್ರಾಂ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಸಲಾಂ ಸಾಹೇಬ್ ಅವರು ಮಾತನಾಡಿ ನಮ್ಮ ಈ ಮಠ ಅನೇಕ ವರ್ಷಗಳಿಂದ ಬಡವರ ಪಾಲಿನ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ ಅನೇಕ ಮದುವೆಗಳನ್ನು ಮಾಡಿಸುವುದರ ಮೂಲಕ ಈ ಮಠ ಖ್ಯಾತಿ ಪಡೆದಿದೆ, ಇನ್ನೂ ಈ ಭಾರಿ ನಮ್ಮ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಬಂದು ವಧು ವರರನ್ನು ಹಾರೈಸಿರುವುದು ಸಂತಸ ತಂದಿದೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಹಿರೇಮಠ ಸಂಸ್ಥಾನ ಮಠದ ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು, ಬಾಚಗೊಂಡನಹಳ್ಳಿ ತೊಂಟದಾರ್ಯ ಮಠದ ಪೂಜಶ್ರೀ ಶಿವಮಹಾಂತ ಸ್ವಾಮಿಗಳು, ಮುಖಂಡರಾದ ವೈಡಿ ಅಣ್ಣಪ್ಪ,, ವೈ, ಡಿ. ಲಕ್ಷೀದೇವಿ ಅಣ್ಣಪ್ಪ, ಬಸಾಪುರ ಮಂಜುನಾಥ್, ಅರಸೀಕೆರೆ ಮಂಜುನಾಥ್, ಸಲಾಂ ಸಾಹೇಬ್, ಕೆ.ಮಹಾಂತೇಶ್, ಎ. ಷಣ್ಮುಖಪ್ಪ, ಎಬಿ ಮಂಜುನಾಥ್ ಗೌಡ, ರೆಹಮಾತ್ ತುಲ್ಲಾ, ಎಂ. ಅಜಿಮ್, ಕೆ. ನಿಂಗಪ್ಪ, ಲಕ್ಷ್ಮಿ ನಾರಾಯಣ್ ಶೆಟ್ಟಿ, ದೊಡ್ಡ ಸಿದ್ದಪ್ಪ ದಂಡೆಪ್ಪ ಇಟ್ಟಿಗಳ್ಳಿ ಬಸವರಾಜ್, ಗ್ರಾಮದ ಮುಖಂಡರು ಸೇರಿದಂತ್ತೆ ವಧುವರರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು.


Share It

You cannot copy content of this page