ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟನೆ: ಲಯನ್ಸ್ ಕ್ಲಬ್ ಸಹಯೋಗದ ಶಿಬಿರ

Share It

ಬೆಂಗಳೂರು: ಆಡುಗೋಡಿ ವಾರ್ಡ್‌ನ ರಾಜೇಂದ್ರ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ನಾರಾಯಣ ನೇತ್ರಾಲಯದ ಬೆಂಬಲದೊಂದಿಗೆ, ಲಯನ್ಸ್ ಕ್ಲಬ್ ನೇತೃತ್ವ ಆರ್‌ಎಲ್‌ಆರ್, ಎಲ್‌ಸಿಬಿ ಬಿಟಿಎಂ ನೈಟಿಂಗೇಲ್ ಮತ್ತು ಎಲ್‌ಸಿಬಿ ಗ್ರೇಟರ್ ಕೋರಮಂಗಲ ತಂಡದಿಂದ ಮೆಗಾ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರವನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟನೆ ಮಾಡಿದರು. ಶಿಬಿರದಲ್ಲಿ 242 ಜನರಿಗೆ ಕಣ್ಣಿನ ತಪಾಸಣೆ ನಡೆಸಲಾಯಿತು, ಅದರಲ್ಲಿ 17 ಜನರನ್ನು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗಿದೆ, ಉಳಿದ 45 ಜನರ ಬ್ಯಾಚ್ ಅನ್ನು ಮುಂದಿನ ದಿನಾಂಕದೊಳಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ತಿಳಿಸಲಾಗುವುದು ಮತ್ತು 131 ಜನರಿಗೆ ಶೀಘ್ರದಲ್ಲೇ ಕನ್ನಡಕಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ನಡೆಸಿದ್ದಕ್ಕಾಗಿ ನಾನು ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ಸಚಿವ ರಾಮಲಿಂಗ ರೆಡ್ಡಿ ಅವರು ಧನ್ಯವಾದ  ಅರ್ಪಿಸಿದ್ದು, ಎಲ್‌.ಎನ್. ಚಾಮುಂಡೇಶ್ವರಿ ಡಿಸಿ-ಮಹಿಳಾ ಸಬಲೀಕರಣ, ಲಯನ್ಸ್ ಇಂಟರ್‌ ನ್ಯಾಶನಲ್, ಸೌಮ್ಯಾ ರೆಡ್ಡಿ, ಅಧ್ಯಕ್ಷರು, ಕೆಪಿಸಿಸಿ ಮಹಿಳಾ ಕಾಂಗ್ರೆಸ್, ಡಾ. ಶ್ರೀನಿವಾಸನ್ ವೇಲು, ಎಲ್‌.ಎನ್. ಭಕ್ತ ವತ್ಸಲಾ ರೆಡ್ಡಿ, ಮಾಜಿ ಗವರ್ನರ್ ಎಲ್‌ಸಿಬಿ-ಜಿಕೆ, ಎಲ್‌ಎನ್ ವಸಂತ ಅಧ್ಯಕ್ಷ ಎಲ್‌ಸಿಬಿ-ಬಿಟಿಎಂ ನೈಟಿಂಗೇಲ್, ಮಾಜಿ ಕಾರ್ಪೊರೇಟರ್‌ಗಳಾದ ಮುರುಗೇಶ್ ಮುದಲಿಯಾರ್, ಮಂಜುಳಾ ಸಂಪತ್, ಮಂಜುಳಾ ರೆಡ್ಡಿ ರಾಜೇಂದ್ರನಗರ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದರು.


Share It

You May Have Missed

You cannot copy content of this page