ಬೆಂಗಳೂರು: RCB ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲತಾಣದಲ್ಲಿ ‘ಅರೆಸ್ಟ್ ಕೋಹ್ಲಿ’ ಅಭಿಯಾನ ಆರಂಭವಾಗಿದೆ.
ಘಟನೆಯಲ್ಲಿ 11 ಜನ ಅಮಾಯಕರು ಪ್ರಾಣ ಕಳರದುಕೊಂಡಿದ್ದು, ಕರ್ನಾಟಕ ಸರಕಾರ ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ ಏಳು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದೆ. KSCA, RCB ಮತ್ತು DNA ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಾಲ್ವರು ಮ್ಯಾನೇಜರ್ ಗಳನ್ನು ಬಂಧಿಸಲಾಗಿದೆ.
ಈ ನಡುವೆ ಘಟನೆಗೆ ವಿರಾಟ್ ಕೋಹ್ಲಿ ನೀಡಿದ ಪ್ರಚೋದನೆ ಕಾರಣ ಎಂದು ಕೆಲವರು ಕಿಡಿಕಾರಿದ್ದಾರೆ. ಕಪ್ ಗೆದ್ದ ತಕ್ಷಣವೇ ನಾಳೆ ಬೆಂಗಳೂರಿನಲ್ಲಿ ಸೆಲೆಬ್ರೇಷನ್ ಹೇಗಿರುತ್ತೆ ನೋಡಿ ಎಂದು ಕೋಹ್ಲಿ ಘೋಷಿಸಿಬಿಟ್ಟರು. ಇದರ ಪರಿಣಾಮವಾಗಿ ಜನ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೇರಿದರು ಎಂದು ನೆಟ್ಟಿಗರು ಆರೋಪಿಸಿದ್ದಾರೆ.
#arrestkohli ಹ್ಯಾಶ್ ಟ್ಯಾಗ್ ಬಳಸಿ 36 ಸಾವಿರಕ್ಕೂ ಅಧಿಕ ಟ್ವೀಟ್ ಮಾಡಲಾಗಿದೆ. ಪುಷ್ಪ ಸಿನಿಮಾ ರಿಲೀಸ್ ವೇಳೆ ಹೈದರಾಬಾದ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಮಗು ಗಾಯಗೊಂಡ ಘಟನೆಗೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದ ಪ್ರಕರಣವನ್ನು ಬಹುತೇಕರು ಉಲ್ಲೇಖಿಸಿದ್ದಾರೆ.