ತಂದೆಯಿಂದಲೇ ಹಲ್ಲೆ ನಡೆಸಿ ೫ ವರ್ಷದ ಮಗುವಿನ ಕೊಲೆ

Share It

ಚಿತ್ರದುರ್ಗ:ತಂದೆಯೇ ಐದು ವರ್ಷದ ಮಗನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಳಿ ಬಂದಿದೆ.

ಕುಡಿದ ಅಮಲಿನಲ್ಲಿ ಮಗನ ಮೇಲೆ ತಂದೆಯೇ ಹಲ್ಲೆ ನಡೆಸಿದ್ದಾನೆ ಎಂದು ಆತನ ಪತ್ನಿಯೇ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಿಪ್ಪೇಶ್ ಎಂಬಾತ ತನ್ನ ಐದು ವರ್ಷದ ಮಗ ಮಂಜುನಾಥ್ ನನ್ನು ನೆಲಕ್ಕೆ ಬಡಿದು ಕೊಂದಿದ್ದಾನೆ ಎಂದು ಆರೋಪಿಸಲಾಗುತ್ತಿದೆ.

ಮಗು ಊಟ ಬೇಕು ಎಂದು ಹಠ ಮಾಡುತ್ತಿದ್ದು, ತಾಯಿ ಮಗುವನ್ನು ತಿಪ್ಪೇಶ್ ಬಳಿ ಬಿಟ್ಟು, ಪಕ್ಕದ ಮನೆಯಿಂದ ಅನ್ನ ಪಡೆದುಕೊಂಡು ಬಂದು ತಿನ್ನಿಸಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗು ಮೂರ್ಛೆ ತಪ್ಪಿದ್ದು, ಮಗುವಿನ ಪ್ರಜ್ಞೆಯಿಲ್ಲದಂತೆ ಹೊಡೆದಿದ್ದಾನೆ. ಹೀಗಾಗಿ, ಮಗು ಸಾವನ್ನಪ್ಪಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


Share It

You May Have Missed

You cannot copy content of this page