ಉಪಯುಕ್ತ ಸುದ್ದಿ

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್: ರಾಜ್ಯ ಸರ್ಕಾರದಿಂದ ಆಹ್ವಾನ

Share It

ಕರ್ನಾಟಕ ಸರ್ಕಾರದಿಂದ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತವನ್ನು ನೀಡಲಾಗುತ್ತಿದೆ. 2024 ಮತ್ತು 25 ನೆಯ ಸಾಲಿನ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
10.11.2024.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

  1. ಕರ್ನಾಟಕದವರಾಗಿರಬೇಕು.
  2. ವಿದ್ಯಾರ್ಥಿಗಳು ಮುಸ್ಲಿಂ, ಜೈನ್, ಬೌದ್ಧ, ಕ್ರಿಶ್ಚಿಯನ್, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು.
  3. ಪೂರ್ವವಧಿ ಕೋರ್ಸ್ ತೆಗೆದುಕೊಂಡಿರಬೇಕು.
  4. ಕುಟುಂಬದ ಆದಾಯ 2.50 ಕ್ಕಿಂತ ಹೆಚ್ಚಿರಬಾರದು.
  5. ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ವರ್ಷಕ್ಕೆ ಹೊಸ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಸೂಚನೆ:

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
https://sevasindhu.karnataka.gov.in/.
ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ ಸೀಡಿಂಗ್ ಮತ್ತು ಮ್ಯಾಪಿಂಗ್ ಆಗಿಯಬೇಕು. ಹೆಚ್ಚಿನ ಮಾಹಿತಿಗಾಗಿ https://dom.karnataka.gov.in ಗೆ ಭೇಟಿ ನೀಡಿ.

ಅವಶ್ಯಕ ದಾಖಲಾತಿಗಳು :

ಜಾತಿ ಮತ್ತು ಅದಾಯ ಪ್ರಮಾಣ ಪತ್ರ.

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.

ಆಧಾರ್ ಕಾರ್ಡ್.

ಪ್ರಸ್ತುತ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್‌ಎಂ ನರ್ಸಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ರಶೀದಿ.

ಬ್ಯಾಂಕ್‌ ಪಾಸ್‌ ಪುಸ್ತಕ.

ಇತರ ದಾಖಲೆಗಳು.


Share It

You cannot copy content of this page