ಎಚ್.ಡಿ.ಕೆ. ಭೂಕಬಳಿಕೆ ಪ್ರಕರಣ: ತನಿಖಾ ತಂಡ ರಚಿಸಿದ ಸರಕಾರ

Share It

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಭೂಕಬಳಿಕೆ ಆರೋಪದ ಕುರಿತು ತನಿಖೆ ನಡೆಸಲು ಸರಕಾರ ತನಿಖಾ ತಂಡದ ರಚನೆ ಮಾಡಿದೆ.

ವಿಧಾನಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಈ ಕುರಿತು ಹೇಳಿಕೆ ನೀಡಿದ್ದು, ಹೆಚ್‌.ಡಿ ಕುಮಾರಸ್ವಾಮಿ ವಿರುದ್ದ ಸರ್ಕಾರಿ ಜಾಗ ಒತ್ತುವರಿ ಆರೋಪ ವಿಚಾರದಲ್ಲಿ ಹೈಕೋರ್ಟ್ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದೆ. ಹೈಕೋರ್ಟ್ ಸೂಚನೆ ಮೇರೆಗೆ ಅವರ ಜಮೀನು ತನಿಖೆ ಮಾಡಲು ಹೇಳಿದ್ದಾರೆ. ಹೀಗಾಗಿ, ತನಿಖಾ ತಂಡವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಹೈಕೋರ್ಟ್ ಸೂಚನೆಯನ್ನು ಪಾಲಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಹೈಕೋರ್ಟ್ ಸೂಚನೆ ಕೊಟ್ಟಾಗ ಸರ್ಕಾರ ಗೌರವಿಸಬೇಕಾಗುತ್ತದೆ. ಹೈಕೋರ್ಟ್ ‌ಕೊಟ್ಟಿರೋ ಸಮಯದ ಒಳಗೆ ಸಮತಿ ವರದಿ ನೀಡುತ್ತದೆ. ಇದರಲ್ಲಿ ಕುಮಾರಸ್ವಾಮಿ ವಿರುದ್ಧ ನಮ್ಮದೇನೂ ರಾಜಕೀಯ ಇಲ್ಲ ಎಂದರು.


Share It

You May Have Missed

You cannot copy content of this page