ಅಪರಾಧ ಸಿನಿಮಾ ಸುದ್ದಿ

ಜೈಲಿನಲ್ಲಿ ದರ್ಶನ್ ಬೇಟಿಗೆ ಪಟ್ಟು ಹಿಡಿದ ಪವಿತ್ರಾಗೌಡ ?

Share It

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರ ಭೇಟಿ ಮಾಡಲೇಬೇಕು ಎಂದು ಅವರ ಗೆಳತಿ ಹಾಗೂ ಪ್ರಕರಣದ ಎ-೧ ಆರೋಪಿ ಪವಿತ್ರಾಗೌಡ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಡಿವಿಲ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಪ್ರಕರಣದಲ್ಲಿ ಜಾಮೀನು ರದ್ದುಗೊಂಡ ಕಾರಣ ಈ ಇಬ್ಬರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈ ನಡುವೆ ಪರಸ್ಪರ ಭೇಟಿಯಾಗಿ ಬಹಳ ದಿನಗಳಾಗಿದ್ದು, ಅವರ ಭೇಟಿಗೆ ಅವಕಾಶ ಕೊಡಿ ಎಂದು ಪವಿತ್ರಾಗೌಡ ಕೇಳಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ಜೈಲಿಗೆ ಹೋದ ನಂತರ ಈ ಇಬ್ಬರು ಪರಸ್ಪರ ಭೇಟಿಯಾಗಿಲ್ಲ. ಜಾಮೀನು ಸಿಕ್ಕಿದಾಗಲೂ ಪತ್ನಿ ವಿಜಯಲಕ್ಷಿö್ಮ, ದರ್ಶನ್ ಬೆನ್ನಿಗೆ ನಿಂತು ಸಿನಿಮಾ ಕೆಲಸಗಳನ್ನೆಲ್ಲ ನೋಡಿಕೊಳ್ಳುತ್ತಿದ್ದು, ಪವಿತ್ರಾ ಭೇಟಿಗೆ ಅವಕಾಶವೇ ಸಿಕ್ಕಿಲ್ಲ. ಹೀಗಾಗಿ, ಈಗ ಭೇಟಿಗೆ ಅವಕಾಶ ಕೊಡುವಂತೆ ಪವಿತ್ರಾ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.


Share It

You cannot copy content of this page