ಅಪರಾಧ ಸುದ್ದಿ

ಮೈಮೇಲೆ ಸಾಂಬಾರ್‌ ಬಿದ್ದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತ

Share It

ದಾವಣಗೆರೆ: ಮೈಮೇಲೆ ಸಾಂಬಾರ್‌ ಬಿದ್ದು ಗಾಯಗೊಂಡಿದ್ದ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಶ್ರೀನಿವಾಸ್‌ ಅವರ ಪುತ್ರ ಮಿಥುನ್‌ (4) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

“ಬಾಲಕನ ಮೇಲೆ ಸೆ.15ರಂದು ಬಿಸಿ ಸಾಂಬಾರ್ ಬಿದ್ದಿತ್ತು‌. ತಕ್ಷಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆಗೆ ಸೆ.26ರಂದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ” ಎಂದು ಜಗಳೂರು ಠಾಣೆಯ ಸಿಪಿಐ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

“ಅಡುಗೆ ಮನೆಯ ಕಟ್ಟೆಯ ಮೇಲಿಟ್ಟಿದ್ದ ಬಿಸಿ ಸಾಂಬಾರ್‌ ಪಾತ್ರೆಯನ್ನು ಬಾಲಕ ಎಳೆದಿದ್ದಾನೆ. ಈ ವೇಳೆ ಅದು ಮೈಮೇಲೆ ಬಿದ್ದು ಎದೆ, ಕಾಲುಗಳು ಸೇರಿದಂತೆ ದೇಹದ ಭಾಗಗಳು ಸುಟ್ಟಿದ್ದವು” ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page