ಅಪರಾಧ ರಾಜಕೀಯ ಸುದ್ದಿ

ಎಚ್.ಡಿ.ಕುಮಾರಸ್ವಾಮಿ ತೋಟಕ್ಕೆ ನುಗ್ಗಿದ ಜೆಸಿಬಿ: ಅಧಿಕಾರಿಗಳಿಂದ ಒತ್ತುವರಿ ತೆರವು ಕಾರ್ಯ

Share It

ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಗೆ ಜೆಸಿಬಿ ಯಂತ್ರಗಳನ್ನು ನುಗ್ಗಿಸಿರುವ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜಮೀನಿನ ಒತ್ತುವರಿ ಕಾರ್ಯ ನಡೆದಿತ್ತು. ವರದಿಯ ಅನ್ವಯ 14 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದ್ದು, ಅದನ್ನು ತೆರವುಗೊಳಿಸಲು ಅಧಿಕಾರಿಗಳು ಆರಂಭಿಸಿದ್ದಾರೆ.

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯ ಬಳಿಯಲ್ಲಿ 14 ಎಕರೆ ಜಮೀನು ತೆರವು ಕಾರ್ಯ ಆರಂಭಿಸಿದ್ದಾರೆ. ನಾಲ್ಕು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು ತೋಟದಲ್ಲಿ ಬೆಳೆಸಿದ್ದ ತೆಂಗಿನ ಸಸಿಗಳು ಸೇರಿದಂತೆ ಅನೇಕ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.


Share It

You cannot copy content of this page