ಅಪರಾಧ ಸುದ್ದಿ

ಪ್ರೀತಿಯ ನಾಟಕವಾಡಿ ಚಿನ್ನಾಭರಣ ದೋಚುತ್ತಿದ್ದಾತನ ಬಂಧನ

Share It

ಮಂಗಳೂರು: ಮಹಿಳೆಯರನ್ನು ಪ್ರೀತಿಯ ಬಲೆಗೆ ಬೀಲಿಸಿ, ಸರಸ ಸಲ್ಲಾಪವಾಡಿ ನಂತರ ಚಿನ್ನಾಭರಣ ದೋಚುತ್ತಿದ್ದಾತನನ್ನು ಮಂಗಳೂರಿನ ಕಂಕನಾಡಿ‌ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ನಿವಾಸಿ ರೋಹಿತ್ ಮಥಾಯೀಸ್ ಬಂಧಿತ ಆರೋಪಿ.
ರೋಹಿತ್ ಮಥಾಯೀಸ್ ಸಾಮಾಜಿಕ ಜಾಲತಾಣದ ಮೂಲಕ ಮಂಗಳೂರು-ಉಡುಪಿ ಭಾಗದ ಕ್ರಿಸ್ಚಿಯನ್ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಸಂಪರ್ಕ ಬೆಳೆಸಿ ಪ್ರೀತಿಗೆ ಬೀಳಿಸಿಕೊಂಡು ಅವರ ಮನೆಗೆ ಹೋಗಿ ಬರುತ್ತಿದ್ದ. ನಂತರ ಸರಸ ಸಲ್ಲಾಪವಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ.

ಈತ 2019ರಲ್ಲಿ ನಿವೃತ್ತ ಪಿಡಿಓ ಭರತಲಕ್ಷ್ಮಿ ಅವರನ್ನಹ ಕೊಲೆ‌ ಮಾಡಿ ಮೃತ ದೇಹವನ್ನು ಕಲ್ಯಾದ ಬಾವಿಯೊಂದರಲ್ಲಿ ಪ್ಲಾಸ್ಟಿಕ್​ನಲ್ಲಿ ಸುತ್ತಿ ಎಸೆದು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ನಂತರ ವಿಚಾರಣೆಗೆ ಭಾರದೆ ತಲೆಮರೆಸಿಕೊಂಡಿದ್ದ.
2021ರಲ್ಲಿ ಕಂಕನಾಡಿಯ ಮಹಿಳೆಯೋರ್ವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಮತ್ತೆ ಇದೇ ರೀತಿ ಕೃತ್ಯ ಎಸಗಲು ಮುಂದಾದಾಗ ಮಾಹಿತಿ ತಿಳಿದ ಕಂಕನಾಡಿ ನಗರ ಪೊಲೀಸರು ರೋಹಿತ್ ಮಥಾಯೀಸ್​ನನ್ನು ಬಂಧಿಸಿದ್ದಾರೆ. ಆರೋಪಿಯಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.


Share It

You cannot copy content of this page