ಅಪರಾಧ ರಾಜಕೀಯ ಸುದ್ದಿ

‘ಪ್ರಜ್ವಲ್ ರೇವಣ್ಣಂಗೆ ಜಾಮೀನು ಕೊಡ್ಲೇ ಬಾರದು’:ತೀರ್ಪು ಕಾಯ್ದಿರಿಸಿದ ಕೋರ್ಟ್

Share It

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿರುವುದು ಸತ್ಯ ಎಂದು ಸಾಭೀತಾಗಿದ್ದು, ವಿಡಿಯೋ ಮತ್ತು ಫೋಟೋಗಳು ನೈಜ ಎಂದು ಎಫ್ ಎಸ್ಎಲ್ ವರದಿ ದೃಢೀಕರಿಸಿದೆ. ಹೀಗಾಗಿ, ಅವರಿಗೆ ಜಾಮೀನು ನೀಡಬಾರದು ಎಂದು ಎಸ್ಐಟಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ಇಂದು ವಿಶೇಷ ನ್ಯಾಯಾಲಯದಲ್ಲಿ ನಡೆಯಿತು‌ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತು.

ಈ ವೇಳೆ ಜಾಮಿನು ನೀಡುವುದನ್ನು ಪ್ರಬಲವಾಗಿ ವಿರೋಧಿಸಿದ ಎಸ್ಐಟಿ ಪರ ವಕೀಲರು, ಪ್ರಜ್ವಲ್ ಈಗಾಗಲೇ ಒಮ್ಮೆ ವಿದೇಶಕ್ಕೆ ಪರಾರಿಯಾಗಿದ್ದನ್ನು ಉಲ್ಲೇಖಿಸಿ, ಜಾಮೀನು ನೀಡಿದರೆ ಮತ್ತೇ ವಿದೇಶಕ್ಕೆ ಪರಾರಿಯಾಗಿ ವಿಚಾರಣೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಅಶೋಕ್ ನಾಯಕ್ ವಾದಿಸಿದರು.

ವಾದ ಪ್ರತಿ ವಾದ ಆಲಿಸಿದ ನ್ಯಾಯಾಲಯ, ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು.


Share It

You cannot copy content of this page