ಅಪರಾಧ ಸುದ್ದಿ

ಗೋಕಾಕ ತುಂಬು ಗರ್ಭಿಣಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಸಾವು : ಪತಿ ಆತ್ಮಹತ್ಯೆಗೆ ಯತ್ನ

Share It

ಬೆಳಗಾವಿ : ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಾಗಿದ್ದ ಗೋಕಾಕ ತಾಲೂಕಿನ ತುಂಬು ಗರ್ಭಿಣಿ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ರಾಧಿಕಾ ಮಲ್ಲೇಶ ಗಡ್ಡಿಹೊಳಿ (19) ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದು, ಈ ವಿಷಯ ತಿಳಿದು ಅವರ ಪತಿ ಮಲ್ಲೇಶಿ ಅವರು ವಿಷಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ‌ಕೆಎಂಸಿಆರ್‌ಐನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗರ್ಭಿಣಿಯಾಗಿದ್ದ ರಾಧಿಕಾ ಅವರು ಆರು ಬಾರಿ ಫಿಟ್ಸ್‌ಗೆ ಒಳಗಾಗಿದ್ದರು.‌ ಇವರ ಗರ್ಭಕೋಶದಲ್ಲಿಯೇ 8 ತಿಂಗಳ ಮಗು ಸಾವನ್ನಪ್ಪಿತ್ತು. ಸೋಮವಾರ ಅವರನ್ನು ಬೆಳಗಾವಿಯ ಬಿಮ್ಸ್‌ನಿಂದ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.


Share It

You cannot copy content of this page