ಅಪರಾಧ ಸುದ್ದಿ

ಕೆಎಎಸ್ ನೇಮಕಕ್ಕೆ ಸಿಎಂ ಕಚೇರಿಯ ಟಿಪ್ಪಣಿ ನಕಲು: ಆರೋಪಿಯ ಬಂಧನ

Share It

ಬೆAಗಳೂರು: ಕೆಎಎಸ್ ಅಧಿಕಾರಿಯೊಬ್ಬರ ನೇಮಕಕ್ಕೆ ಸಂಬAಧಿಸಿದAತೆ ಸಿಎಂ ಕಚೇರಿಯ ಟಿಪ್ಪಣಿಯನ್ನೇ ನಕಲು ಮಾಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ವಿಧಾನಸೌಧ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ವ್ಯಕ್ತಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ರಾಘವೇಂದ್ರ ಎನ್ನಲಾಗಿದೆ. ಸಚಿವಾಲಯದಿಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಘವೇಂದ್ರನನ್ನು ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ವಿವಿಧ ಶಾಸಕರ ಬಳಿ ಪಿಎ ಆಗಿ ಕೆಲಸ ಮಾಡಿದ್ದ ರಾಘವೇಂದ್ರ, ಸಿಎಂ ಕಚೇರಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದಲ್ಲದೆ, ಪೋಸ್ಟಿಂಗ್ ಕೊಡಿಸುವ ಸಲುವಾಗಿ ಅನೇಕರಿಗೆ ವಂಚನೆ ಮಾಡಿರುವ ದೂರುಗಳು ಕೇಳಿಬಂದಿವೆ.


Share It

You cannot copy content of this page