ಚಿತ್ರದುರ್ಗ: ಪೊಲೀಸರ ವೇಷದಲ್ಲಿ ಬಂದ ಕಳ್ಳರು ಉದ್ಯಮಿಯನ್ನು ವಂಚಿಸಿ ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನಾಭರಣ ದೋಚಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ವಾಸವಿ ಕಾಲನಿಯಲ್ಲಿ ಘಟನೆ ನಡೆದಿದ್ದು, ಉದ್ಯಮಿ ಲತಾ ಎಂಬುವವರ ಮನೆಗೆ ಕಾರೊಂದರಲ್ಲಿ ನಾಲ್ವರು ಆಗಮಿಸಿದ್ದರು. ಎಲ್ಲರೂ ತಾವು ಪೊಲೀಸ್ ಎಂದು ಹೇಳಿ ಪ್ರಕರಣವೊಂದರಲ್ಲಿ ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದರು ಎನ್ನಲಾಗಿದೆ.
ಅನಂತರ ಮನೆಯಲ್ಲಿದ್ದ ಸುಮಾರು 300 ಗ್ರಾಂ ಚಿನ್ನಾಭರಣಗಳನ್ನು ಪಡೆದು, ಠಾಣೆಗೆ ಬಂದು ವಾಪಸ್ ಪಡೆಯುವಂತೆ ಸೂಚಿಸಿ ಹೊರಟು ಹೋಗಿದ್ದಾರೆ. ಆದರೆ, ಅನಂತರ ಅವರು ಪೊಲೀಸರಲ್ಲ ಎಂಬುದು ಗೊತ್ತಾಗಿದೆ.
ಈ ಸಂಬAಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಡಿವೈಎಸ್ಪಿ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.