ಉಪಯುಕ್ತ ಸುದ್ದಿ

ಹುತಾತ್ಮ ಯೋಧನ ಪತ್ನಿಗೆ 11 ವರ್ಷದಿಂದ ಭೂಮಿ ನೀಡದ ಸರಕಾರ: ನಾಲ್ಕು ವಾರದ ಗಡುವು ನೀಡಿದ ಹೈಕೋರ್ಟ್

Share It

ಜೈಪುರ: 11 ವರ್ಷದಿಂದ ಹುತಾತ್ಮ ಯೋಧನ ಪತ್ನಿಗೆ ಭೂಮಿ ನೀಡದೆ ಸತಾಯಿಸುತ್ತಿರುವ ರಾಜಸ್ಥಾನ ಸರಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದ್ದು, ನಾಲ್ಕು ವಾರಗಳಲ್ಲಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಹೇಂದ್ರ ಕುಮಾರ್ ಗೋಯಲ್ ಅವರು, ಪ್ರಧಾನ ಕಾರ್ಯದರ್ಶಿ ಅವರಿಗೆ ಈ ವಿಷಯವನ್ನು ನಾಲ್ಕು ವಾರಗಳಲ್ಲಿ ಇತ್ಯರ್ಥಪಡಿಸುವಂಥೆ ಸೂಚಿಸಿದ್ದಾರೆ. ಈ ಕುರಿತು ಮೇ. ೫ರೊಳಗೆ ನ್ಯಾಯಾಲಯಕ್ಕೆ ಅಫಿಡೇವಿಟ್ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.

ಹುತಾತ್ಮ ಯೋಧ ಭನ್ವರ್ ಸಿಂಗ್ ಪತ್ನಿ ದರ್ಯಾವೋ ಕನ್ವರ್ ಅವರಿಗೆ ಜೈಪುರದ ಫುಲೇರಾ ತಹಸೀಲ್ ವ್ಯಾಪ್ತಿಯಲ್ಲಿ ಭೂಮಿ ನೀಡಲಾಗಿತ್ತು. ಆದರೆ, ಆ ಭೂಮಿ ನದಿಪಾತ್ರದಲ್ಲಿದ್ದು, ಇದು ಕೃಷಿಗೆ ಸೂಕ್ತವಲ್ಲ ಎಂದು ಹೇಳಲಾಗಿದ್ದು, ಇದಕ್ಕೆ ಸಂಬAಧಿಸಿ ರಾಜ್ಯದ ಕಂದಾಯ ಮಂಡಳಿ ಬೇರೆ ಸೂಕ್ತ ಭೂಮಿ ನೀಡುವಂತೆ ಆದೇಶ ನೀಡಿತ್ತು.

ಈ ಆದೇಶ ಪ್ರಕಟವಾಗಿ 11 ವರ್ಷ ಕಳೆದರೂ ರಾಜಸ್ಥಾನ ಸರಕಾರ ವಿಧವೆಗೆ ಭೂ ಮಂಜೂರಾತಿ ಮಾಡಿರಲಿಲ್ಲ. ಹೀಗಾಗಿ, 2022 ರಲ್ಲಿ ಮಹಿಳೆ ರಾಜಸ್ಥಾನ ಹೈಕೋರ್ಟ್ ಬಾಗಿಲು ತಟ್ಟಿದ್ದರು. ಅವರ ಪರವಾಗಿ ವಕೀಲ ಒ.ಪಿ ಮಿಶ್ರಾ ವಾದ ಮಂಡನೆ ಮಾಡಿದ್ದರು.


Share It

You cannot copy content of this page