ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರನ್ನು ರಕ್ಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ ಎಂಬುವವರ ಮನೆಯ ಮೇಲೆ ಗುಡ್ಡ ಕುಸಿದಿತ್ತು. ಅವಶೇಷಗಳಡಿ ಸಿಲುಕಿ ಪ್ರ್ರೇಮಾ ಪೂಜಾರಿ ಮತ್ತು ಮೊಮ್ಮಗ ಆರ್ಯನ್ ಸಾವನ್ನಪ್ಪಿದ್ದರು. ಸೊಸೆ ಅಶ್ವಿನಿ ಮತ್ತು ಮತ್ತೊಂದು ಮಗು ಮಣ್ಣಿನಡಿ ಸಿಲುಕಿತ್ತು.
ಕಾರ್ಯಾಚರಣೆ ನಡೆಸಿದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಈ ಇಬ್ಬರನ್ನು ರಕ್ಷಣೆ ಮಾಡುವ ಮೂಲಕ ಅವರಿಗೆ ಮರುಜೀವ ನೀಡಿವೆ.